Advertisement

ಕೊಲ್ಲೂರು: ಸಂಸದ ರಾಘವೇಂದ್ರ ತುಲಾಭಾರ, ಚಂಡಿಕಾ ಯಾಗ

11:12 AM Aug 17, 2019 | Sriram |

ಕೊಲ್ಲೂರು: ಬೈಂದೂರು-ಶಿವಮೊಗ್ಗ ಲೋಕಸಭಾ ಸಂಸದ ಬಿ. ವೈ. ರಾಘವೇಂದ್ರ ಅವರು ಸಕುಟುಂಬಿಕರಾಗಿ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗ ಮಿಸಿ ಶ್ರೀದೇವಿಯ ದರ್ಶನ ಪಡೆದು ಚಂಡಿಕಾ ಹೋಮ, ತುಲಾಭಾರ ಸೇವೆ ಸಲ್ಲಿಸಿದರು. ಬಿ. ವೈ. ರಾಘವೇಂದ್ರ ,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ

Advertisement

ಹುಟ್ಟುಹಬ್ಬದ ಈ ಸಂದರ್ಭ ಲೋಕಕಲ್ಯಾಣಾರ್ಥ, ನೆರೆ ಸಂತ್ರಸ್ತರಿಗೆ ಸಂಕಷ್ಟ ದೂರವಾ ಗಲು ಈ ಪೂಜೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಬೈಂದೂರು ಶಾಸಕ ಬಿ. ಎಂ. ಸುಕುಮಾರ್‌ ಶೆಟ್ಟಿ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿ ದೀಪಕ್‌ ಕುಮಾರ್‌ ಶೆಟ್ಟಿ, ದೇಗುಲದ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಶೆಟ್ಟಿ, ಉಪ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ ಮೂರ್ತಿ, ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್‌, ಅರ್ಚಕ ರಾಮಚಂದ್ರ ಅಡಿಗ, ಯುವ ಮೋರ್ಚಾ ಅಧ್ಯಕ್ಷ ಶರತ್‌ ಶೆಟ್ಟಿ, ಬಿಜೆಪಿ ಜಿಲ್ಲಾ ವಕೀಲರ ವೇದಿಕೆ ಸಂಚಾಲಕ ಕೆ. ಬಿ. ಶೆಟ್ಟಿ, ಬಾಂಡ್ಯ ಎಜುಕೇಶನ್‌ ಟ್ರಸ್ಟ್‌ ಮುಖ್ಯಸ್ಥ ಬಾಂಡ್ಯ ಸುಭಾಷ್‌ಚಂದ್ರ ಶೆಟ್ಟಿ, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ದತ್ತಾತ್ರೇಯ ಶಿವಮೊಗ್ಗ, ಅಧಿಕಾರಿಗಳಾದ ರಾಜಪ್ಪ, ರಂಗನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next