Advertisement

ಶಿವಕುಮಾರ್‌ಗೆ ಶ್ರೀರಾಮುಲು ಸವಾಲು 

06:45 AM Oct 14, 2018 | Team Udayavani |

ಹೊಸಪೇಟೆ: ಬಳ್ಳಾರಿಗೆ ಯಾವುದೇ ನಾಯಕರು ಬರಲಿ, ಅವರನ್ನು ಎದುರಿಸುವ ಶಕ್ತಿ ನನಗೆ ಇದೆ. ಈ ಉಪಚುನಾವಣೆಯಲ್ಲಿ ಮಣ್ಣಿನ ಮಗಳು (ಜೆ.ಶಾಂತ) ಗೆಲ್ಲುತ್ತಾಳ್ಳೋ,ಕನಕಪುರದ ಡಿಕೆಶಿ ಗೆಲ್ಲುತ್ತಾರೋ ನೋಡೋಣ ಎಂದು ಶಾಸಕ ಬಿ.ಶ್ರೀರಾಮುಲು ಸವಾಲು ಹಾಕಿದ್ದಾರೆ.

Advertisement

ನಗರದಲ್ಲಿ ಮಾತನಾಡಿ, ಬಳ್ಳಾರಿಗೆ ಎಂತಹ ನಾಯಕರೇ ಬರಲಿ, ಎದುರಿಸುವಷ್ಟು ಶಕ್ತಿ ನನಗಿದೆ. ಡಿ.ಕೆ.ಶಿವಕುಮಾರ್‌
ಅವರಿಗೇನು ಎರಡು ಕೊಂಬುಗಳಿವೆಯೇ?ಕನಕಪುರದ ಡಿಕೆಶಿ ಗೆಲ್ಲುತ್ತಾರೋ, ಬಳ್ಳಾರಿ ಮನೆ  ಮಗಳು ಶಾಂತಾ ಗೆಲ್ಲುತ್ತಾರೋ
ನೋಡೋಣ ಎಂದರು. ಕಳೆದ ಉಪಚುನಾವಣೆಯಲ್ಲಿ ಡಿಕೆಶಿ ಕುತಂತ್ರ ಮಾಡಿ ಗೆದ್ದಿದ್ದಾರೆ. ಅವರ ಭವಿಷ್ಯ ಅವರಿಗೇ ಗೊತ್ತಾಗಿಲ್ಲ. ಯಾವಾಗ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಹಣ ಇದೆ ಎಂಬ ಅಹಂನಿಂದ ಅವರು ಮೆರೆಯುತ್ತಿದ್ದಾರೆ. ದೇವರು ನನ್ನ ಪಾಲಿಗೆ ಕಣ್ಣು ತೆರೆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೇರು ಸಮೇತ ಕಿತ್ತೆಸೆಯುವ ತಾಕತ್ತಿದೆ ಎಂದು ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next