Advertisement

ಜಿಲ್ಲಾಸ್ಪತ್ರೆಯ ನೆಲದಲ್ಲಿ ಕುಳಿತು ರೋಗಿಗಳ ಸಮಸ್ಯೆ ಆಲಿಸಿದ ಸಚಿವ ಶ್ರೀರಾಮುಲು

09:42 AM Aug 31, 2019 | keerthan |

ವಿಜಯಪುರ: ಶುಕ್ರವಾರ ವಿಜಯಪುರದ ಸರಕಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಆಸ್ಪತ್ರೆ ಆವರಣದ ನೆಲದಲ್ಲೇ ಕುಳಿತು ರೋಗಿಗಳ ಸಮಸ್ಯೆ ಆಲಿಸಿ, ಸರಳತೆ ಮೂಲಕ ಗಮನ ಸೆಳೆದರು.

Advertisement

ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆಸ್ಪತ್ರೆ ಆವರಣದಲ್ಲಿ ಕೆಲ‌ ಕಟ್ಟಡಗಳ ನಿರ್ಮಾಣ ಕಾಮಗಾರಿ ವೀಕ್ಷಿಸಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಶರಣಪ್ಪ ಕಟ್ಟಿ, ಡಿಎಚ್ಓ ಡಾ.ಮಹೇಂದ್ರ ಕಾಪಸೆ ಅವರಿಂದ ಪ್ರಗತಿಯ ಮಾಹಿತಿ ಪಡೆದರು.

ನಂತರ ಪ್ರವಾಹ ಬಾಧಿತ ಪ್ರದೇಶಗಳ ಸಂತ್ರಸ್ತರ ಆರೋಗ್ಯ ರಕ್ಷಣೆಗಾಗಿ ವಿಶೇಷ ಗಮನ ಹರಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ಬಿ.ಶ್ರೀರಾಮುಲು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next