Advertisement

ಸಚಿವ ಬಿ.ಸಿ.ಪಾಟೀಲ್ ರಾಜೀನಾಮೆ ನೀಡಲಿ : ಶಿವರಾಜ ತಂಗಡಗಿ ಆಗ್ರಹ

01:31 PM Dec 04, 2020 | keerthan |

ಕೊಪ್ಪಳ: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದಿರುವ ಕೃಷಿ ಸಚಿವ ಬಿ‌.ಸಿ. ಪಾಟೀಲ್ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ಆಗ್ರಹಿಸಿದರು.

Advertisement

ನಗರದಲ್ಲಿ‌ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ಸದ್ಯ ಭತ್ತ ಸೇರಿ ಇತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆ‌ಲೆ‌ ಸಿಗುತ್ತಿಲ್ಲ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರ ಇದ್ದು ಸತ್ತಂತಿದೆ ಎಂದರು.

ಇದನ್ನೂ ಓದಿ:ರೈತರನ್ನು ಹೇಡಿ ಅಂದಿಲ್ಲ, ಆತ್ಮಹತ್ಯೆಯಂತ ಕೆಲಸ ಹೇಡಿತನದ್ದು ಎಂದಿದ್ದೆ: B.C.ಪಾಟೀಲ್

ಇಂಥಹ ಸಮಯದಲ್ಲಿ ಸರ್ಕಾರ ರೈತರಿಗೆ ಧೈರ್ಯ ತುಂಬಬೇಕು. ಅದನ್ನು ಬಿಟ್ಟು ಅವರನ್ನು ಜರಿಯುವುದು‌ ಎಷ್ಟು ಸರಿ? ರೈತ ನಾಯಕ ಎಂದು ಕರೆದುಕೊಳ್ಳುವ ಸಿಎಂ ಬಿ.ಎಸ್.ಯಡಿಯೂರಪ್ಪ ರೈತರಿಗೆ ನೀಡುವ ಮರ್ಯಾದೆ ಇದೇನಾ? ರೈತರ ಬಗ್ಗೆ ಸರ್ಕಾರಕ್ಕೆ ಗೌರವವಿದ್ದರೆ, ಕೂಡಲೇ ಸಚಿವ ಬಿ.ಸಿ,ಪಾಟೀಲ್ ರಾಜೀನಾಮೆ ಪಡೆಯಲಿ ಎಂದರು.

ಶನಿವಾರ ರಾಜ್ಯ ಬಂದ್ ಗೆ ಬೆಂಬಲ ನೀಡುವ ಬಗ್ಗೆ ರಾಜ್ಯಮುಖಂಡರು ನಿರ್ಧಾರ ಕೈಗೊಳ್ಳುವರು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next