Advertisement

ಅಯ್ಯಪ್ಪ  ಭಕ್ತನ ಆತ್ಮಾಹುತಿ : ಇಂದು ಹರತಾಳಕ್ಕೆ ಕರೆ ನೀಡಿರುವ ಬಿಜೆಪಿ

08:54 AM Dec 14, 2018 | Team Udayavani |

ತಿರುವನಂತಪುರ: ಶಬರಿಮಲೆಯಲ್ಲಿ ನಿಷೇಧಾಜ್ಞೆ ವಾಪಸ್‌ಗೆ ಆಗ್ರಹಿಸಿ ವಿಧಾನಸಭೆ
ಎದುರು ಬಿಜೆಪಿ ನಡೆಸು ತ್ತಿರುವ ಸತ್ಯಾಗ್ರಹದ ಸ್ಥಳದಲ್ಲಿ ಅಯ್ಯಪ್ಪ ಭಕ್ತರೊಬ್ಬರು ಆತ್ಮಾ ಹುತಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಬಿಜೆಪಿ, ಶುಕ್ರವಾರ ಹರತಾಳಕ್ಕೆ ಕರೆ ನೀಡಿದೆ. 

Advertisement

ವೇಣುಗೋಪಾಲನ್‌ ನಾಯರ್‌ (55) ಮೃತ ವ್ಯಕ್ತಿ. ಸತ್ಯಾಗ್ರಹ ಸ್ಥಳಕ್ಕೆ ಬಂದ ಇವರು ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು. ಸ್ಥಳ ದಲ್ಲೇ ಇದ್ದ ಪೊಲೀಸರು, ಬಿಜೆಪಿ ಕಾರ್ಯಕರ್ತರು ಬೆಂಕಿ ನಂದಿಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದರು ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸಚಿವಾಲಯದ ಎದುರು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಕೆ.ಪದ್ಮನಾಭನ್‌ ಅವರು ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದ ಸ್ಥಳದಲ್ಲೇ ಆತ್ಮಾಹುತಿ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next