Advertisement

ಆಯುಷ್‌ ಪದ್ಧತಿಗಳಿಗೆ ಸಿಗಲಿ ಅಗ್ರಸ್ಥಾನ

09:29 AM May 30, 2020 | Suhan S |

ಧಾರವಾಡ: ಭಾರತೀಯ ಆಯುಷ್‌ ವೈದ್ಯ ಪದ್ಧತಿಗಳಿಗೆ ಅಗ್ರಸ್ಥಾನ ಸಿಗಬೇಕು ಎಂದು ಜಿಲ್ಲಾ ಆಯುಷ್‌ ವೈದ್ಯಾಧಿಕಾರಿ ಡಾ| ಸಂಗಮೇಶ ಕಲಹಾಳ ಹೇಳಿದರು.

Advertisement

ಬಿ.ಡಿ. ಜತ್ತಿ ಹೋಮಿಯೋಪತಿ ಮೆಡಿಕಲ್‌ ಕಾಲೇಜಿನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇಶಿಯವಾಗಿರುವ ಚಿಕಿತ್ಸಾ ಪದ್ಧತಿಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಭಾರತದಲ್ಲಿ ಆಯುಷ್‌ ವೈದ್ಯಕೀಯ ಚಿಕಿತ್ಸೆಗಳು ಪ್ರಧಾನವಾಗಬೇಕು ಎಂದರು.

ಚೀನಾ ದೇಶದಲ್ಲಿ ಅಲ್ಲಿನ ಅಕ್ಯುಪಂಕ್ಚರ್‌ ಮತ್ತು ಅಕ್ಯುಪ್ರಷರ್‌ ವೈದ್ಯ ಪದ್ಧತಿಗಳು ಪ್ರಧಾನವಾಗಿವೆ. ಅದೇ ರೀತಿ ಭಾರತದಲ್ಲಿಯೂ ಆಯುಷ್‌ ಪದ್ಧತಿಗಳಿಗೆ ಮೊದಲ ಸ್ಥಾನ ಸಿಗಬೇಕು. ಉಳಿದ ವೈದ್ಯ ಪದ್ಧತಿಗಳು ಪರ್ಯಾಯವಾಗುವ ರೀತಿಯಲ್ಲಿ ಬೆಳೆಯಬೇಕು. ಆಯುಷ್‌ ಮೆಡಿಕಲ್‌ ಕಾಲೇಜುಗಳು ಸಂಶೋಧನೆ, ಅಧ್ಯಯನಗಳ ಮೂಲಕ ಆಯುಷ್‌ ಮಹತ್ವವನ್ನು ಜನತೆಗೆ ತಿಳಿಸಬೇಕು ಎಂದರು.

ಮೇ 31ರಂದು ಸೇವಾ ನಿವೃತ್ತಿ ಹೊಂದಲಿರುವ ಡಾ| ಸಂಗಮೇಶ ಕಲಹಾಳ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪ್ರಾಚಾರ್ಯ ಡಾ|ಆನಂದ ಕುಲಕರ್ಣಿ, ಡಾ| ಶಶಿಧರ ಹೊಂಬಳ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next