Advertisement

Ayudha Puja: ಪಾರಂಪರಿಕ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕ ಬಣ್ಣ ಬಳಸದಂತೆ ಸುತ್ತೋಲೆ

07:30 PM Oct 19, 2023 | Team Udayavani |

ಬೆಂಗಳೂರು: ವಿಧಾನಸೌಧ, ವಿಕಾಸಸೌಧ ಮುಂತಾದ ಪಾರಂಪರಿಕ ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ವೇಳೆ ಕಚೇರಿ ಒಳಗೆ ಮತ್ತು ಕಾರಿಡಾರ್‌ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸದಂತೆ ಸರಕಾರ ಸುತ್ತೋಲೆ ಹೊರಡಿಸಿದೆ.

Advertisement

ಪ್ರತಿ ಬಾರಿ ಈ ಇಂಥ ಸುತ್ತೋಲೆ ಹೊರಡಿಸಲಾಗುತ್ತಿದೆಯಾದರೂ ಪಾಲನೆಯಾಗದಿರುವುದು ವಿಷಾದನೀಯ. ಈ ಬಾರಿ ಸರಕಾರದ ಪಾರಂಪರಿಕ ಕಟ್ಟಡಗಳಲ್ಲಿ ಆಯುಧ ಪೂಜೆ ವೇಳೆ ಕುಂಬಳಕಾಯಿ ಹಾಗೂ ರಂಗೋಲಿಯಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಅರಿಶಿಣ, ಕುಂಕುಮ ಮತ್ತಿತರ ಸುಣ್ಣ, ಬಣ್ಣಗಳನ್ನು ಬಳಸುವಂತಿಲ್ಲ. ತಪ್ಪಿದರೆ ಸಂಬಂಧಪಟ್ಟ ಶಾಖೆಯ ವಿರುದ್ಧ ಅನಿವಾರ್ಯವಾಗಿ ಹೊಣೆಗಾರಿಕೆ ನಿಗದಿಪಡಿಸಬೇಕಾಗುತ್ತದೆ ಎಂದು ಸಿಬಂದಿ ಮತ್ತು ಆಡಳಿತ ಸುಧಾರಣೆ (ಕಾರ್ಯಕಾರಿ) ಅಧೀನ ಕಾರ್ಯದರ್ಶಿ ಕೆ.ಎಚ್‌. ಕೇಶವಪ್ರಸಾದ್‌ ಸುತ್ತೋಲೆಯಲ್ಲಿ ಸ್ಪಷ್ಪಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next