Advertisement

ಹೈಟೆಕ್‌ ಪ್ರವಾಸೋದ್ಯಮ ತಾಣವಾಗಲಿದೆ ಅಯೋಧ್ಯೆ: ಕೇಂದ್ರದ ಯೋಜನೆ

04:44 PM May 29, 2017 | udayavani editorial |

ಲಕ್ನೋ : ಶ್ರೀರಾಮ ಜನ್ಮಭೂಮಿ ಎಂದೇ ತಿಳಿಯಲ್ಪಟ್ಟಿರುವ, ಪೌರಾಣಿಕ ಮಹತ್ವದ ಅಯೋಧ್ಯೆಯು ಈಗಿನ್ನು ಪ್ರವಾಸಿಗರ ಅತ್ಯಾಕರ್ಷಕ ತಾಣವಾಗಿ ಹೈಟೆಕ್‌ ಅಭಿವೃದ್ದಿಯನ್ನು ಕಾಣಲಿದೆ. ಅಂತೆಯೇ ಅಯೋಧ್ಯೆಯಲ್ಲಿನ್ನು ವೈಭವೋಪೇತ ಹೊಟೇಲುಗಳು, ಹೈಟೆಕ್‌ ರೈಲ್ವೆ ನಿಲ್ದಾಣ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಕ್ಯಾಂಪಸ್‌ ಮೈದಳೆಯಲಿವೆ. 

Advertisement

ಅಯೋಧ್ಯೆಯನ್ನು ಈ ರೀತಿ ಅತ್ಯಾಧುನಿಕ ಹೈಟೆಕ್‌ ನಗರಿಯನ್ನಾಗಿ ರೂಪಿಸುವ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಿದೆ. ಅಂತೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರಕ್ಕೆ ಹಲವು ರೀತಿಯಲ್ಲಿ ನೆರವಾಗಲಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಹೈಟೆಕ್‌ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಹಲವಾರು ತಾಣಗಳನ್ನು ಆಯ್ಕೆ ಮಾಡಿದ್ದು ಅವುಗಳಲ್ಲಿ ಅಯೋಧ್ಯೆ ಕೂಡ ಒಂದಾಗಿದೆ. 

ಅಯೋಧ್ಯೆಯಲ್ಲಿ 225 ಕೋಟಿ ರೂ. ವೆಚ್ಚದಲ್ಲಿ ಮೈದಳೆಯಲಿರುವ ರಾಮಾಯಣ ಮ್ಯೂಸಿಯಂ ಗೆ ಆವಶ್ಯವಿರುವ ಭೂಮಿಯನ್ನು ಆದಿತ್ಯನಾಥ್‌ ಸರಕಾರ ಮಂಜೂರು ಮಾಡಿದೆ. 

ಅಯೋಧ್ಯೆಯ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ  ಸರಕಾರ ಆಯ್ಕೆ ಮಾಡಿರುವ ಇತರ ಪ್ರಸಿದ್ಧ ತಾಣಗಳೆಂದರೆ ಗಯಾ, ಮಥುರಾ, ವಾರಾಣಸಿ, ಸಾರನಾಥ್‌, ಗೋರಖ್‌ಪುರ, ಆಗ್ರಾ, ಅಮೃತಸರ, ಕನ್ಯಾಕುಮಾರಿ ಮತ್ತು ಗುವಾಹಟಿ.

Advertisement

Udayavani is now on Telegram. Click here to join our channel and stay updated with the latest news.

Next