Advertisement

ಕೋರ್ಟ್‌ ನಿಗಾವಣೆಯ ಅಯೋಧ್ಯೆ ಮಧ್ಯಸ್ಥಿಕೆ: ಆದೇಶ ಕಾದಿರಿಸಿದ ಸುಪ್ರೀಂ

11:04 AM Mar 06, 2019 | udayavani editorial |

ಹೊಸದಿಲ್ಲಿ : ಅಯೋಧ್ಯೆ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ  ಕೋರ್ಟ್‌ ನಿಗಾವಣೆಯ ಮಧ್ಯಸ್ಥಿಕೆಯನ್ನು ನಡೆಸುವ ಕುರಿತ ಆದೇಶವನ್ನು ಸುಪ್ರೀಂ ಕೋರ್ಟ್‌ ಕಾದಿರಿಸಿತು. 

Advertisement

ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ಜಸ್ಟಿಸ್‌ ಗಳಾದ ಎಸ್‌ ಎ ಬೋಬಡೆ, ಡಿವೈ ಚಂದ್ರಚೂಡ್‌, ಅಶೋಕ್‌ ಭೂಷಣ್‌ ಮತ್ತು ಎಸ್‌ ಅಬ್ದುಲ್‌ನಜೀರ್‌ ಅವರನ್ನು ಒಳಗೊಂಡ ಐವರು ನ್ಯಾಯಮೂರ್ತಿಗಳ ಪೀಠವು ಇಂದು ಬುಧವಾರ ಅಯೋಧ್ಯೆ ಭೂ ವಿವಾದದ ವಿಚಾರಣೆ ನಡೆಸಿತು. 

ದಶಕಗಳಷ್ಟು ಹಳೆಯ ಬಾಬರಿ ಮಸೀದಿ – ರಾಮಜನ್ಮಭೂಮಿಯ ಒಡೆತನಕ್ಕೆ ಸಂಬಂಧಿಸಿದ ವಿವಾದವನ್ನು ಕೋರ್ಟ್‌ ನಿಗಾವಣೆಯ ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಯತ್ಸಿಸುವುದಕ್ಕೆ ಅವಕಾಶ ಕಲ್ಪಿಸುವ ಸಿವಿಲ್‌ ಪ್ರೊಸೀಜರ್‌ ಕೋಡ್‌ ನ ಸೆ.89ನ್ನು ಬಳಸಬಹುದೇ ಎಂಬುದನ್ನು ಐವರು ನ್ಯಾಯಮೂರ್ತಿಗಳ ಸುಪ್ರೀಂ ಪೀಠ ಇಂದು ವಿಶ್ಲೇಷಿಸಿತು. 

ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡುವ ಆದೇಶಕ್ಕೆ ತಾವು ಬದ್ಧರಿರುವುದಾಗಿ ಮುಸ್ಲಿಂ ಅರ್ಜಿದಾರರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next