Advertisement

ಆಯೋಧ್ಯೆ ಭೂ ವಿವಾದ ಕೇಸ್‌: ಶೀಘ್ರ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್‌

10:34 AM Jul 10, 2019 | Team Udayavani |

ಹೊಸದಿಲ್ಲಿ : ರಾಮಜನ್ಮಭೂಮಿ – ಬಾಬರಿ ಮಸೀದಿ ಭೂ ಒಡೆತನ ವಿವಾದದ ಕೇಸಿನ ಮೂಲ ಕಕ್ಷಿದಾರರಲ್ಲಿ ಒಬ್ಬರಾದ ಗೋಪಾಲ ಸಿಂಗ್‌ ವಿಶಾರದ ಅವರು ಪ್ರಕರಣದ ತುರ್ತು ವಿಚಾರಣೆಯನ್ನು ಕೋರಿ ಇಂದು ಮಂಗಳವಾರ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದಾರೆ.

Advertisement

ರಾಮಜನ್ಮ ಭೂಮಿ ಭೂ ವಿವಾದವನ್ನು ಸೌಹಾರ್ದದಿಂದ ಬಗೆ ಹರಿಸುವ ಸಲುವಾಗಿ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಎಫ್ ಎಂ ಐ ಕಲೀಫ‌ುಲ್ಲಾ ನೇತೃತ್ವದಲ್ಲಿ ಮೂವರು ಸದಸ್ಯರ ಸಂಧಾನಕಾರರ ಸಮಿತಿಯನ್ನು ನೇಮಿಸಲಾದ ಬಳಿಕದಲ್ಲಿ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ; ಆದುದರಿಂದ ಈ ವಿಷಯದ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೊಳ್ಳಬೇಕು ಎಂದು ಕಕ್ಷಿದಾರ ವಿಶಾರದ ಅವರು ತಮ್ಮ ಮೇಲ್ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕಕ್ಷಿದಾರ ಗೋಪಾಲ ಸಿಂಗ್‌ ವಿಶಾರದ ಅವರ ಮನವಿಯನ್ನು ಪುರಸ್ಕರಿಸಿದ ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠವು, ಕೇಸಿನ ತುರ್ತು ವಿಚಾರಣೆಗಾಗಿ ಅದನ್ನು ಪಟ್ಟಿಗೆ ಸೇರಿಸಲು ಆದೇಶಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next