Advertisement

Ayodhya; ನಾಚ್‌, ಗಾನಾ ಮಂದಿರ ಉದ್ಘಾಟನೆ: ರಾಹುಲ್‌ ಗಾಂಧಿ ಟೀಕೆ

01:49 AM Sep 29, 2024 | Team Udayavani |

ಹೊಸದಿಲ್ಲಿ: ಅಯೋಧ್ಯಾ ರಾಮಮಂದಿರ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಶ್ರೀಮಂತರ, ಸಮಾಜದ ಮೇಲ್ವರ್ಗವನ್ನಷ್ಟೇ ಆಹ್ವಾನಿಸಿದ್ದರು ಎಂದು ಟೀಕಿಸುತ್ತಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಇದೀಗ ಕಾರ್ಯಕ್ರಮವನ್ನೇ “ನಾಚ್‌ ಗಾನಾ’ (ಹಾಡು ಹಾಗೂ ಕುಣಿಯುವ) ಕಾರ್ಯಕ್ರಮ ಎಂದು ಹೇಳಿದ್ದಾರೆ.

Advertisement

ನಟ ಅಮಿತಾಭ್‌ ಬಚ್ಚನ್‌, ಅಂಬಾನಿ ಸೇರಿ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಅಲ್ಲಿ ರೈತರು, ಕಾರ್ಮಿಕ ವರ್ಗಕ್ಕೆ ಸೇರಿದವರು ಇರಲಿಲ್ಲ ಎಂದು ಹರಿಯಾಣದ ಹಿಸಾರ್‌ನಲ್ಲಿ ನಡೆದ ರ್‍ಯಾಲಿಯಲ್ಲಿ  ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕ ನಳಿನ್‌ ಕೊಹ್ಲಿ ಟೀಕಿಸಿ “ಕಾಂಗ್ರೆಸ್‌ ಯಾಕಿಷ್ಟು ರಾಮ ವಿರೋಧಿಯಾಗಿದೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹ್‌ಜಾದ್‌ ಪೂನಾವಾಲ, “ಈ ರೀತಿಯ ಹೇಳಿಕೆ ಯನ್ನು ಬೇರ್ಯಾವುದೇ ಧರ್ಮ, ಅವರ ಆಚರಣೆ ಬಗ್ಗೆ ರಾಹುಲ್‌ಗೆ ಮಾತಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ರಾಹುಲ್‌ ಕುಟುಂಬ ರಾಮನ ಅಸ್ತಿತ್ವ, ಮಂದಿರವನ್ನು ವಿರೋಧಿಸುತ್ತಲೇ ಇದೆ. ಯುಪಿಎ ಸರಕಾರ ಹಿಂದೂ ಭಯೋತ್ಪಾ ದನೆಯನ್ನು ಸೃಷ್ಟಿಸಿತು. ದ್ವಾರಕಾ ಪೂಜೆಯನ್ನೂ ನಾಟಕ ಎಂದರು. ಈಗ ಈ ಹೇಳಿಕೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next