Advertisement

Ayodhya; ಗಂಗೆಯ ಮೆರವಣಿಗೆ: ಭೀಷ್ಮನ ಸ್ಮರಣೆ

05:44 PM Feb 17, 2024 | Team Udayavani |

ಅಯೋಧ್ಯೆ/ ಉಡುಪಿ: ಅಯೋಧ್ಯೆಯಲ್ಲಿ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶನಿವಾರ ಭೀಷ್ಮಾಷ್ಟಮಿಯನ್ನು ವಿಶಿಷ್ಟವಾಗಿ ಆಚರಿಸಿದರು.

Advertisement

ಮುಂಜಾನೆ ಪಟ್ಟದ ದೇವರ ಪೂಜೆಯ ಬಳಿಕ ಭೀಷ್ಮನಿಗೆ ಅರ್ಘ್ಯ ಸಮರ್ಪಿಸಿದರು .ಬಳಿಕ ಗಾಂಗೇಯ ಭೀಷ್ಮನ ಸ್ಮರಣಾರ್ಥ ರಜತ ಕುಂಭದಲ್ಲಿ ಪವಿತ್ರ ಗಂಗೋದಕವನ್ನು ತುಂಬಿಸಿ ಗಂಗಾಪೂಜೆ ನೆರವೇರಿಸಿದರು. ನಂತರ ಮಠದಿಂದ ಶಿಷ್ಯರು ಭಕ್ತರ ವಿಷ್ಣುಸಹಸ್ರನಾಮ‌ ಪಾರಾಯಣದೊಂದಿಗೆ ಶ್ರೀಗಳು ಮೆರವಣಿಗೆಯಲ್ಲಿ ಗಂಗೆಯನ್ನು ಅಯೋಧ್ಯೆ ರಾಮಮಂದಿರದ ಯಾಗಶಾಲೆಗೆ ಹೊತ್ತು ತಂದರು.ಅಲ್ಲಿ ವೈದಿಕರಿಂದ ವಿವಿಧ ಹೋಮಹವನಗಳು ಹಾಗೂ ಶ್ರೀಗಳು ಕಲಶಾರಾಧನೆ ಕಲಶಪೂಜೆಗಳನ್ನು ನೆರವೇರಿಸಿ ಶ್ರೀಬಾಲರಾಮನಿಗೆ ಗಾಂಗೇಯ ಭೀಷ್ಮಾಚಾರ್ಯರ ಪ್ರೀತ್ಯರ್ಥವಾಗಿ ಗಂಗಾಭಿಷೇಕ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next