Advertisement

Ayodhya; ಶೃಂಗೇರಿ ಪೀಠದ ಹೆಸರಲ್ಲಿ ಕಿಡಿಗೇಡಿಗಳಿಂದ ಸುಳ್ಳು ಸಂದೇಶ!

11:59 PM Jan 08, 2024 | Team Udayavani |

ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆಗೆ ದಿನಗಣನೇ ಆರಂಭವಾಗಿದ್ದು ಇದೇ ಸಂದರ್ಭದಲ್ಲಿ‌ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ‌ ಶೃಂಗೇರಿ ಶಾರದಾ ಪೀಠದ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಗಳ ಭಾವಚಿತ್ರ ಬಳಸಿ ಶ್ರೀರಾಮ ಪ್ರತಿಷ್ಠಾಪನೆಯನ್ನು ವಿರೋಧಿಸುತ್ತಿದ್ದಾರೆಂದು ಹರಿಬಿಟ್ಟಿರು ಸಂದೇಶ ಶುದ್ಧ ಸುಳ್ಳು ಸಂದೇಶವೆಂದು ಶ್ರೀಮಠದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಶ್ರೀಗಳ ಭಾವಚಿತ್ರ ಬಳಸಿ ಅಯೋಧ್ಯೆ ಶ್ರೀರಾಮನ‌ ಪ್ರತಿಷ್ಠಾಪನೆಗೆ ವಿರೋಧವಿದೆ ಎಂಬರ್ಥದಲ್ಲಿ ಸಂದೇಶವನ್ನು ನಕಲಿ ವೆಬ್ಸೈಟ್ ಮೂಲಕ ಹರಿಬಿಟ್ಟಿದ್ದಾರೆ. ಇದು ಮಠದ ಅಧಿಕೃತ ವೆಬ್ ಸೈಟ್ ಅಲ್ಲ. ಕೀಡಿಗೇಡಿಗಳು ದುರುದ್ದೇಶ ದಿಂದ ಇಂತಗ ಸಂದೇಶವನ್ನು ಹರಿಬಿಟ್ಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಾಣ ಪ್ರತಿಷ್ಠಾಮಹೋತ್ಸವದ ಸುಸಂದರ್ಭದಲ್ಲಿ ಎಲ್ಲಾ ಆಸ್ತಿಕರು ಯಥಾಯೋಗ್ಯವಾಗಿ ಭಾಗವಹಿಸಿ ಶ್ರೀರಾಮನ ಪೂರ್ಣಕೃಪೆಗೆ ಪಾತ್ರರಾಗುವಂತೆ ಶ್ರೀಗಳು ಆಶೀರ್ವದಿಸಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next