Advertisement

ಇಂದು ಅಯೋಧ್ಯೆ ಪ್ರಕರಣ ವಿಚಾರಣೆ

09:08 AM Jul 19, 2019 | mahesh |

ಹೊಸದಿಲ್ಲಿ: ರಾಮಮಂದಿರ ಪ್ರಕರಣದಲ್ಲಿ ನಡೆಯುತ್ತಿರುವ ರಾಜಿ ಸಂಧಾನ ಪ್ರಗತಿಯನ್ನು ಸುಪ್ರೀಂಕೋರ್ಟ್‌ ಜುಲೈ 18 ರಂದು ಪರಿಶೀಲನೆ ನಡೆಸಲಿದೆ. ಐವರು ನ್ಯಾಯ ಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠವು ಜುಲೈ 11 ರಂದು ರಾಜಿ ಸಂಧಾನ ಸಮಿತಿಯಿಂದ ವರದಿ ಆಗ್ರಹಿಸಿತ್ತು. ಅಷ್ಟೇ ಅಲ್ಲ, ರಾಜಿ ಸಂಧಾನ ಪ್ರಕ್ರಿಯೆ ವಿಫ‌ಲವಾದರೆ ಜುಲೈ 25 ರಿಂದ ದೈನಂದಿನ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿತ್ತು. ಅಯೋಧ್ಯೆ ಪ್ರಕರಣದಲ್ಲಿ ಮೂಲ ದಾವೆದಾರ ಗೋಪಾಲ್‌ ಸಿಂಗ್‌ ವಿಶಾರದ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ ಈ ನಿರ್ದೇಶನ ಹೊರಡಿಸಿತ್ತು. ಅದರಂತೆ ಗುರವಾರ ರಾಜಿ ಸಂಧಾನ ಸಮಿತಿ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಎಫ್ಎಂಐ ಖಲೀಫ‌ುಲ್ಲಾ ಸುಪ್ರೀಂಕೋರ್ಟ್‌ಗೆ ಗುರುವಾರ ಹಾಜರಾಗಿ, ಸಂಧಾನ ಪ್ರಕ್ರಿಯೆಯ ಪ್ರಗತಿ ಹಾಗೂ ಸ್ಥಿತಿಗತಿಯನ್ನು ವರದಿ ಮಾಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next