Advertisement

Ayodhya; ಮೋದಿ ಭೇಟಿ ಮಾರನೇ ದಿನವೇ ಮೀರಾಗೆ ಆಯುಷ್ಮಾನ್‌ ಕಾರ್ಡ್‌

01:22 AM Jan 01, 2024 | Team Udayavani |

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಶನಿವಾರ ಭೇಟಿ ನೀಡಿದ್ದ ಉಜ್ವಲಾ ಯೋಜನೆಯ 10ನೇ ಕೋಟಿ ಫ‌ಲಾನುಭವಿ ಮಹಿಳೆಯ ಮನೆಗೆ ರವಿ ವಾರ ಖುದ್ದು ಅಯೋಧ್ಯಾ ಜಿಲ್ಲಾಧಿಕಾರಿ ಭೇಟಿ ನೀಡಿ ಆಯುಷ್ಮಾನ್‌ ಕಾರ್ಡ್‌ ವಿತರಿ­ಸಿ­ದ್ದಾರೆ. ಶನಿ ವಾ ರ ಅಯೋಧ್ಯೆ ಭೇಟಿ ವೇಳೆ ಮೋದಿ ಅವರು ಉಜ್ವಲಾ ಯೋಜನೆ ಫ‌ಲಾನುಭವಿ ಮೀರಾ ಮಂಜ್ಹಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಮೀರಾ ಅವರಿಗೆ ಆಯುಷ್ಮಾನ್‌ ಕಾರ್ಡ್‌ ವಿತರಣೆಯಾಗದೇ ಇರುವುದು ಸಿಎಂ ಯೋಗಿ ಅವರ ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ತತ್‌ಕ್ಷಣವೇ ಕಾರ್ಡ್‌ ನೀಡುವಂತೆ ಯೋಗಿ ಆದೇಶಿಸಿದ್ದರು. ಅದ ರಂತೆ, ಜಿಲ್ಲಾಧಿಕಾರಿ ನಿತೀಶ್‌ ಕುಮಾರ್‌ ಅವರು ಮೀರಾ ಅವರ ನಿವಾಸಕ್ಕೆ ತೆರಳಿ ಕಾರ್ಡ್‌ ವಿತರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next