Advertisement

Ayodhya: ಜ. 31ರಿಂದ ಅಯೋಧ್ಯೆಗೆ 35 ಸಾವಿರ ರಾಮ ಭಕ್ತರ ಪ್ರವಾಸ: ಬಿ.ವೈ.ವಿಜಯೇಂದ್ರ

12:43 AM Jan 21, 2024 | Team Udayavani |

ಬೆಂಗಳೂರು: ರಾಮ ಮಂದಿರ ಲೋಕಾರ್ಪಣೆ ಕಾರ್ಯ ಕ್ರಮವನ್ನು ರಾಜ್ಯದಲ್ಲಿರುವ 160 ಪಿವಿಆರ್‌ ಚಿತ್ರ ಮಂದಿರಗಳಲ್ಲಿ ನೇರ ಪ್ರಸಾರದ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡ ಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಇದರ ಜತೆಗೆ ಜ. 31ರಿಂದ ಮಾ. 25ರ ವರೆಗೆ ರಾಮ ಮಂದಿರಕ್ಕೆ ರಾಜ್ಯದಿಂದ 35 ಸಾವಿರ ಮಂದಿ ಭಕ್ತರು ತೆರಳಲಿದ್ದಾರೆ. ಅವರಿಗಾಗಿ ವಿಶೇಷ ರೈಲು ಪ್ರಯಾಣದ ವ್ಯವಸ್ಥೆ ಮಾಡ ಲಾಗುತ್ತದೆ ಎಂದು ಪ್ರಕಟಿಸಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಶನಿವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ಜ. 22ರಂದು ಸರಕಾರಿ ರಜೆ ಘೋಷಿಸುವಂತೆ ಈಗಾ ಗಲೇ ಮನವಿ ಮಾಡಿದ್ದೇವೆ. ಆ ದಿನ ಜನರು ಉತ್ತರಾಭಿ ಮುಖವಾಗಿ 5 ದೀಪ ಬೆಳಗ ಬೇಕು ಎಂದು ಮನವಿ ಮಾಡಿದರು.

ಇದರ ಜತೆಗೆ ಬಿಜೆಪಿಯು ರಾಜ್ಯಾದ್ಯಂತ ರವಿವಾರದಿಂದ “ಸೆಲ್ಫಿ ವಿತ್‌ ನನ್ನ ರಾಮ’ ಕಾರ್ಯಕ್ರಮ ಆಯೋಜಿಸಿದೆ. ಅದಕ್ಕಾಗಿ ಸೆಲ್ಫಿ ಪಾಯಿಂಟ್‌ ನಿರ್ಮಾಣ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next