Advertisement

ಮತ್ತೆ ಖಾಕಿ ತೊಟ್ಟ ಆಯೇಷಾ

01:52 PM Nov 08, 2021 | Team Udayavani |

“ಬಿಎಸ್‌ಆರ್‌ ಫಿಲಂಸ್‌’ ಲಾಂಛನದಲ್ಲಿ ತೆಲುಗಿನ ಬೋಯಪತಿ ಸುಬ್ಬರಾವ್‌ ಅವರು ನಿರ್ಮಿಸುತ್ತಿರುವ, ಶಶಿಕಾಂತ್‌ ಆನೇಕಲ್‌ ನಿರ್ದೇಶನದ “ಖಲಾಸ್‌’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

Advertisement

ಈ ಹಿಂದೆ “ಜನಗಣಮನ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಶಶಿಕಾಂತ್‌ ಎರಡನೇ ಬಾರಿಗೆ “ಖಲಾಸ್‌’ ಎಂಬ ಮತ್ತೂಂದು ಆ್ಯಕ್ಷನ್‌ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶಶಿಕಾಂತ್‌, “ರಾಜಕಾರಣಿ ಹಾಗೂ ಪೊಲೀಸ್‌ ಅಧಿಕಾರಿಯ ನಡುವೆ ನಡೆಯುವ ಕಥಾಹಂದರ ಈ ಸಿನಿಮಾದಲ್ಲಿದೆ. ರೌಡಿಗಳನ್ನು ಬೆಳೆಸುವುದು ನನ್ನ ಜೀವನ ಎಂದು ರಾಜಕಾರಣಿ ಹೇಳಿದರೆ, ಅಂತಹ ರೌಡಿಗಳನ್ನು ಮಟ್ಟ ಹಾಕುವುದೇ ನನ್ನ ಜೀವನ ಎಂದು ಪೊಲೀಸ್‌ ಅಧಿಕಾರಿ ಹೇಳುತ್ತಾರೆ. ಇದೇ ಈ ಚಿತ್ರದ ಕಥಾವಸ್ತು’ ಎಂದು ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು.

“ಖಲಾಸ್‌’ ಚಿತ್ರದಲ್ಲಿ ನಾಯಕಿಯಾಗಿ ಪೊಲೀಸ್‌ ಅಧಿಕಾರಿ ಲುಕ್‌ನಲ್ಲಿ ಆಯೇಷಾ ಅಭಿನಯಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಆಯೇಷಾ, “ನನ್ನದು ಇದರಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ. ದುಷ್ಟ ರಾಜಕಾರಣಿಗಳನ್ನು ಸರಿದಾರಿಗೆ ತಂದು ಸಮಾಜಕ್ಕೆ ಒಳಿತು ಮಾಡುವ ದಿಟ್ಟ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಸಾಕಷ್ಟು ಆ್ಯಕ್ಷನ್‌ ದೃಶ್ಯಗಳು, ಖಡಕ್‌ ಡೈಲಾಗ್ಸ್‌ ಸಿನಿಮಾದಲ್ಲಿದೆ. ಕಥೆ ಮತ್ತು ಪಾತ್ರ ಚೆನ್ನಾಗಿದೆ’ ಎಂದು ಪಾತ್ರ ಪರಿಚಯ ಮಾಡಿಕೊಟ್ಟರು.

ಇದನ್ನೂ ಓದಿ:ಪ್ರಶಸ್ತಿಗಿಂತ ಅಪ್ಪು ವ್ಯಕ್ತಿತ್ವವೇ ದೊಡ್ಡದು: ನಟ ಚೇತನ್

ಉಳಿದಂತೆ ತೆಲುಗಿನ ಖ್ಯಾತ ನಟ ಸುಮನ್‌, ಉಮೇಶ್‌ ಬಣಕಾರ್‌, ಕುರಿ ರಂಗ, ರವಿ ಕಾಳೆ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Advertisement

ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ “ಖಲಾಸ್‌’ ಚಿತ್ರೀಕರಣ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. “ಖಲಾಸ್‌’ ಚಿತ್ರದ ಹಾಡುಗಳಿಗೆ ಕ್ಲಾರೆನ್ಸ್‌ ಅಲೇನ್‌ ಕ್ರಿಸ್ಟ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಸಿದ್ದಾರ್ಥ್ ರಾಜ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next