Advertisement

ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ : ಆಯನೂರು ಮಂಜುನಾಥ್

02:23 PM May 17, 2021 | Team Udayavani |

ಶಿವಮೊಗ್ಗ  :  ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗ್ತಾ ಇದೆ. ಆದರೆ, ಅಧಿಕಾರಿಗಳು ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದ್ದಾರೆ ಎಂದು ಕೋವಿಡ್ ನಿಯಂತ್ರಣ ಸಭೆಯಲ್ಲಿ ಎಂಎಲ್ ಸಿ‌ ಆಯನೂರು ಮಂಜುನಾಥ್ ಮೆಗ್ಗಾನ್ ಆಸ್ಪತ್ರೆ ವೈದ್ಯರ ವಿರುದ್ದ ಆರೋಪ ಮಾಡಿದ್ದಾರೆ.

Advertisement

ಕೇವಲ ಆರ್ಟಿಪಿಸಿಎರ್ ಟೆಸ್ಟ್ ಲೆಕ್ಕ ಮಾತ್ರ ತೋರಿಸ್ತಾ ಇದ್ದಾರೆ. ಸಿಟಿ ಸ್ಕ್ಯಾನ್ ಮಾಡಿ ಬಂದವರನ್ನ ಕೋವಿಡ್ ಲೆಕ್ಕ ಹಾಗೂ ಸತ್ತವರ ಲೀಸ್ಟ್ ಗೂ ಸೇರಿಸ್ತಾ ಇಲ್ಲ. ಇದಕ್ಕೆ ನಾನು ರೆಕಾರ್ಡ್ ಬೇಕಾದ್ರೂ ಕೊಡಬಲ್ಲೇ ಎಂದು ಸಭೆಯಲ್ಲಿ ಆಯನೂರು ಆಕ್ರೋಶ ಹೊರ ಹಾಕಿದ್ದಾರೆ.

ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದೆ. ವೈದ್ಯರ ನಡುವೆ ಹೊಂದಾಣಿಕೆ ಕೊರತೆ ಇದೆ. ಹೊಂದಾಣಿಕೆ ಕೊರತೆಯಿಂದಾಗಿ  ಆಗುತ್ತಿದೆ ಎಂದು ಆರೋಪಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next