Advertisement

ಮರಳು ಕಲಾಕೃತಿಯಲ್ಲಿ ಡೆಂಗ್ಯೂ, ಮಲೇರಿಯಾ ಜಾಗೃತಿ

01:04 AM Aug 04, 2019 | Team Udayavani |

ಉಡುಪಿ: ಭಯಾನಕ ಡೆಂಗ್ಯೂ, ಮಲೇರಿಯಾ ರೋಗದ ಬಗ್ಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಮಣಿಪಾಲದ ಮರಳು ಶಿಲ್ಪ ಕಲಾವಿದರಾದ ಶ್ರೀನಾಥ್‌ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಅವರು ಮರಳು ಕಲಾಕೃತಿ ರಚಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Advertisement

ಮನೆಯ ಆವರಣ ಮತ್ತು ಎಲ್ಲಿಯೂ ನೀರು ನಿಂತು ಡೆಂಗ್ಯೂ ಮತ್ತು ಮಲೇರಿಯಾದ ಲಾರ್ವದ ಬೆಳವಣಿಗೆಗೆ ಅವಕಾಶ ಮಾಡಿಕೊಡಬಾರದು ಎಂದು ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಅವರು ಮನವಿ ಮಾಡಿದ್ದಾರೆ. ಎರಡು ದಿನಗಳ ಕಾಲ ವೀಕ್ಷಣೆಗೆ ಲಭ್ಯವಿದ್ದು, ಒಂದೇ ದಿನದಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ಕಲಾಕೃತಿ ವೀಕ್ಷಣೆ ಮಾಡಿದ್ದಾರೆ. ಕಲಾಕೃತಿಯ ಬದಿಯಲ್ಲಿ ಇಂಗ್ಲಿಷ್‌ನಲ್ಲಿ ಬಿ ಅಲರ್ಟ್‌ ಡೆಂಗ್ಯೂ ಹಾಗೂ ಕನ್ನಡದಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಬಗ್ಗೆ ಜಾಗರೂಕತೆ ವಹಿಸಿ ಎಂಬ ಸಂದೇಶ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next