Advertisement

ಶಾಲಾ ಮಕ್ಕಳಿಂದ ಜಾಗೃತಿ ಜಾಥಾ

09:55 AM Jul 13, 2019 | Team Udayavani |

ಲೋಕಾಪುರ: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಾಗಲಕೋಟೆ ಹಾಗೂ ಅಡವಿ ಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ನೀರು ಮತ್ತು ನೈರ್ಮಲ್ಯ ಜಾಗೃತಿ ಜಾಥಾ ಸಪ್ತಾಹ ನಡೆಯಿತು.

Advertisement

ಆರ್‌ಬಿಜಿ ಫ್ರೌಢಶಾಲೆಯಿಂದ ಆರಂಭಗೊಂಡ ಜಾಗೃತಿ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಡವಿ ಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಸೇರಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಶೌಚಾಲಯ ಬಳಕೆ ಕುರಿತು ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಅಡವಿ ಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ವಾಹಕಿ ಶಿವಕನ್ಯಾ ಕುಳ್ಳೊಳ್ಳಿ ಮಾತನಾಡಿ, ದೇಶದಲ್ಲೆಡೆ ಸ್ವಚ್ಛ ಭಾರತ ಹಲವಾರು ಜಾಗೃತಿ ಮೂಡಿಸಲಾಗಿದೆ.

ಎಲ್ಲರೂ ಸ್ವಚ್ಛತಾ ಕಾರ್ಯ ಹಾಗೂ ಶುದ್ಧ ನೀರು ಕುಡಿಯುವ, ಶೌಚಾಲಯ ಅಗತ್ಯತೆ ಬಗ್ಗೆ ಜನರಲ್ಲಿ ಪ್ರೇರೇಪಿಸುವ ಕೆಲಸ ಮಾಡಿ ಸರ್ಕಾರದ ಆಶಯ ಈಡೇರಿಸಬೇಕಿದೆ ಎಂದರು. ಜಾಥಾದಲ್ಲಿ ಸಹ ಶಿಕ್ಷಕರಾದ ಎಂ.ವೈ. ಮಬ್ರೂರಕರ, ಮಂಜುನಾಥ ಪಾಟೀಲ, ಸಂಸ್ಥೆ ಪದಾಧಿಕಾರಿಗಳೂ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next