Advertisement

“ಮನದ ಸ್ವಚ್ಛತೆಗೂ ಜಾಗೃತಿ ಮೂಡಲಿ’

09:01 PM Jun 15, 2019 | Sriram |

ಹಳೆಯಂಗಡಿ: ಸುಂದರ ಪರಿಸರ ಹಾಗೂ ಸ್ವಚ್ಛ ಗಾಳಿಯೊಂದಿಗೆ ನಮ್ಮ ನಮ್ಮ ಮನದ ಸ್ವಚ್ಛತೆಗೂ ಜಾಗೃತಿ ಮೂಡಿಸಬೇಕು ಎಂದು ಹಳೆಯಂಗಡಿ ಸಿಎಸ್‌ಐ ಅಮ್ಮನ್‌ ಮೇಮೋರಿಯಲ್‌ ಚರ್ಚ್‌ನ ಸಭಾಪಾಲಕ ವ| ವಿನಯಲಾಲ್‌ ಬಂಗೇರ ಹೇಳಿದರು.

Advertisement

ಯುಬಿಎಂಸಿ ಶಾಲೆಯಲ್ಲಿ ನಡೆದ ಕ್ಲಸ್ಟರ್‌ ಮಟ್ಟದ ಸ್ವಚ್ಛಮೇವ ಜಯತೇ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್‌ ಮಾತನಾಡಿದರು.ಕಾರ್ಯಕ್ರಮವನ್ನು ದ. ಕ. ಜಿ. ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಉ.ವ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಪಡುಪ ಣಂಬೂರು ಸಮೂಹ ಸಂಪನ್ಮೂಲ ಕೇಂದ್ರದ ಸಹಕಾರದಲ್ಲಿ ಸಂಯೋಜಿಸಲಾಗಿತ್ತು.ಸಮೂಹ ಸಂಪನ್ಮೂಲ ಕೇಂದ್ರದ ಮುಖ್ಯಸ್ಥೆ ಕುಸುಮಾ ಆರ್‌. ಅವರು ಮಕ್ಕಳಿಗೆ ಸ್ವಚ್ಛ ಭಾರತದ ಪರಿಕಲ್ಪನೆಯ ಸ್ವಚ್ಛಮೇವ ಜಯತೇ ಪ್ರತಿಜ್ಞಾ ವಿಧಿ ಭೋಧಿಸಿದರು.

ತೀರ್ಪುಗಾರರಾಗಿ ದಯಾಕ್ಷಿ, ಪ್ರಮೀಳಾ, ನಳಿನಾಕ್ಷಿ ಸಹಕರಿಸಿದ್ದರು. ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಕಾಂಬ್ಳಿ ಸ್ವಾಗತಿಸಿದರು, ಸಹ ಶಿಕ್ಷಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next