Advertisement

ಕೋರ್ಟ್‌ನಿಂದ ಕೋವಿಡ್ 19 ಬಗ್ಗೆ ಜಾಗೃತಿ ಅಭಿಯಾನ

11:11 AM Apr 03, 2020 | Suhan S |

ಮುಳಬಾಗಿಲು: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಆಡಳಿತದಿಂದ ನಗರದ ಕೋರ್ಟ್‌ ಆವರಣ ದಲ್ಲಿ ಕೋವಿಡ್ 19 ವೈರಸ್‌ ಕುರಿತು ಜನಜಾಗೃತಿ ಅಭಿಯಾನ ನಡೆಯಿತು.  ಪ್ರಧಾನ ಸಿವಿಲ್‌ ನ್ಯಾ. ಹಾಜಿಹುಸೇನ್‌ ಸಾಬ ಯಾದವಾಡ ಜಾಗೃತಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್ 19  ವೈರಸ್‌ ನಿಯಂತ್ರಣಕ್ಕೆ ಸರ್ಕಾರದ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎಂದರು.

Advertisement

ಹಿರಿಯ ಸಿವಿಲ್‌ ನ್ಯಾ. ಬಿ.ಸುಜಾತ ಸುವರ್ಣ, ಹೆಚ್ಚುವರಿ ಸಿವಿಲ್‌ ನ್ಯಾ.ಎ.ಎನ್‌.ಕಾಂತಮ್ಮ, ತಹಶೀಲ್ದಾರ್‌ ಕೆ.ಎನ್‌.ರಾಜಶೇಖರ್‌, ವಕೀಲರ ಸಂಘದ ಅಧ್ಯಕ್ಷ ಎಂ.ಎಲ್‌.ವೆಂಕಟೇಶ್‌, ಹಿರಿಯ ವಕೀಲ ಎಂ.ಎಸ್‌.ಶ್ರೀನಿವಾಸರೆಡ್ಡಿ, ವಕೀಲರ ಸಂಘದ ಕಾರ್ಯದರ್ಶಿ ವೇಣುಗೋಪಾಲ್‌, ಮಾಜಿ ಅಧ್ಯಕ್ಷ ಪ್ರಭಾಕರ್‌, ಪ್ರಸನ್ನ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next