Advertisement

ನೇತ್ರದಾನದ ಜಾಗೃತಿ ಅಗತ್ಯ: ಆಸ್ಕರ್‌ ಫೆರ್ನಾಂಡಿಸ್‌

12:34 PM Sep 13, 2018 | |

ಮಂಗಳೂರು: ನೇತ್ರದಾನ ಉದಾತ್ತ ಕಾರ್ಯ. ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು. ಪ್ರಸಾದ್‌ ನೇತ್ರಾಲಯದ ಆಶ್ರಯ ದಲ್ಲಿ ಡಾ| ಪಿ. ದಯಾನಂದ ಪೈ ಮತ್ತು ಡಾ| ಸತೀಶ್‌ ಪೈ ಚಾರಿಟೆಬಲ್‌ ಕಣ್ಣಿನ ಆಸ್ಪತ್ರೆ ಮಂಗಳೂರು, ಡಾ| ಪಿ. ದಯಾನಂದ ಪೈ ಐ ಬ್ಯಾಂಕ್‌ ಮಂಗಳೂರು, ಜಿಲ್ಲಾ ಅಂಧತ್ವ ನಿವಾರಣ ಘಟಕ, ಲಯನ್ಸ್‌ ಕ್ಲಬ್‌ ಮೆಟ್ರೋ ಗೋಲ್ಡ್‌, ಲಯನ್ಸ್‌ ಕ್ಲಬ್‌ ಬಲ್ಮಠ, ಲಯನ್ಸ್‌ ಕ್ಲಬ್‌ ಕಾವೇರಿ ಸಹಯೋಗದಲ್ಲಿ ಬುಧವಾರ ಪಂಪ್‌ವೆಲ್‌ ನಲ್ಲಿ ನಡೆದ ಕಣ್ಣುದಾನ ಕುರಿತಾದ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಅನೇಕ ಮಂದಿ ಅಂಧರು ಕತ್ತಲಲ್ಲಿ ದಿನ ದೂಡುತ್ತಿದ್ದಾರೆ. ಕಣ್ಣು ದಾನ ಮಾಡಿದರೆ ಅಂಥವರ ಪಾಲಿಗೆ ಬೆಳಕು ನೀಡಿದಂತಾಗುತ್ತದೆ. ವಿದ್ಯಾರ್ಥಿಗಳು, ಯುವಕರಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಬೇಕಾಗಿದೆ ಎಂದರು. ಪ್ರಸಾದ್‌ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ| ಕೃಷ್ಣ ಪ್ರಸಾದ್‌ ಕೆ. ಪ್ರಸ್ತಾವನೆಗೈದು, ದೇಶಾದ್ಯಂತ ಕನಿಷ್ಠ 30,000 ಮಂದಿಗೆ ಕಣ್ಣಿನ ಕರಿಗುಡ್ಡೆ ಆವಶ್ಯಕತೆ ಇದೆ. ಮಿಲಿಯಗಟ್ಟಲೆ ಜನ ದೃಷ್ಟಿ ಹೊಂದಿಲ್ಲ. ಆದರೆ ದೇಶದಲ್ಲಿ ವರ್ಷದಲ್ಲಿ ಕೇವಲ 69,000 ಮಂದಿ ಮಾತ್ರ ಕಣ್ಣುದಾನ ಮಾಡುತ್ತಿದ್ದಾರೆ ಎನ್ನಲು ಬೇಸರವಾಗುತ್ತದೆ. ಒಬ್ಬ ವ್ಯಕ್ತಿ ಕಣ್ಣು ದಾನ ಮಾಡಿದರೆ ಗರಿಷ್ಠ ನಾಲ್ವರಿಗೆ ಕನಿಷ್ಠ ಇಬ್ಬರಿಗೆ ದೃಷ್ಟಿ ಲಭಿಸುತ್ತದೆ. ಮರಣದ ಬಳಿಕ ಇತರರ ಬಾಳಲ್ಲಿ ಬೆಳಕು ನೀಡುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಪಂಪ್‌ವೆಲ್‌ ವೃತ್ತದಿಂದ ಉಜ್ಜೋಡಿ  ಪ್ರಸಾದ್‌ ನೇತ್ರಾಲಯದ ವರೆಗೆ ಕಣ್ಣುದಾನ ಜಾಗೃತಿ ಬಗ್ಗೆ ಜಾಥಾ ನಡೆಯಿತು. ಆಸ್ಕರ್‌ ಫೆರ್ನಾಂಡಿಸ್‌ ಹಾಗೂ ಸಚಿವ ಖಾದರ್‌ ಜಾಥಾಕ್ಕೆ ಚಾಲನೆ ನೀಡಿದರು. ಬ್ಲೋಸಂ ಫೆರ್ನಾಂಡಿಸ್‌, ಲಯನ್ಸ್‌ ಕ್ಲಬ್‌ ನ ಡಾ| ಪ್ರಿಯದರ್ಶಿನಿ, ರಘುರಾಮ್‌ ರಾವ್‌, ಜಿ.ಕೆ. ರಾವ್‌, ಜಗನ್ನಾಥ್‌ ಗಂಭೀರ್‌, ರಶ್ಮಿ ಕೃಷ್ಣ ಪ್ರಸಾದ್‌, ಪ್ರಸಾದ್‌ ನೇತ್ರಾಲಯದ ನಿರ್ದೇಶಕ ಡಾ| ಹರೀಶ್‌ ಶೆಟ್ಟಿ ಉಪಸ್ಥಿತರಿದ್ದರು. ನೇತ್ರದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next