Advertisement

ಗೋಡೆ ಚಿತ್ರ ಬಿಡಿಸಿ ಜಾಗೃತಿ

05:05 PM Apr 15, 2020 | Suhan S |

ಯಳಂದೂರು: ಪಟ್ಟಣದ ಪ್ರಮುಖ ಸ್ಥಳಗಳ, ರಸ್ತೆಗಳಲ್ಲಿ ಕೊರೊನಾ ಬಗ್ಗೆ ಚಿತ್ರ ಬರೆಯುವ ಮೂಲಕ ಪಟ್ಟಣ ಪಂಚಾಯಿತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಪಟ್ಟಣದ ಬಸ್‌ ನಿಲ್ದಾಣ, ಗಾಂಧಿ ಸರ್ಕಲ್‌, ಸುವರ್ಣಾವತಿ ಸೇತುವೆ, ಜೆಎಸ್‌ಎಸ್‌ ವಿದ್ಯಾಸಂಸ್ಥೆಯ ಸುತ್ತುಗೋಡೆ, ಬಳೇಪೇಟೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಗೋಡೆ ಹಾಗೂ ಸರ್ಕಲ್‌ಗ‌ಳಲ್ಲಿ ಕೋವಿಡ್ 19 ತಡೆಗೆ ಸ್ಯಾನಿಟೈಸರ್‌ ಬಳಕೆ, ಕೈತೊಳೆಯುವ ಬಗ್ಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಲಾಕ್‌ಡೌನ್‌ ಸಮಯದಲ್ಲಿ ಪೊಲೀಸರೊಂದಿಗೆ ಸಹಕರಿಸುವುದೂ ಸೇರಿದಂತೆ ಪ್ರಮುಖ ಅಂಶಗಳನ್ನು ಬಿತ್ತರಿಸುವ ಗೋಡೆ ಹಾಗೂ ರಸ್ತೆ ಬರಹಗಳನ್ನು ಕಲಾವಿದರಾದ ಕಾಳಿಪ್ರಸಾದ್‌ ಹಾಗೂ ಗಣೇಶ್‌ರಿಂದ ಚಿತ್ರ ಬಿಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಪಪಂ ಆರೋಗ್ಯಾಧಿಕಾರಿ ಮಹೇಶ್‌ಕುಮಾರ್‌ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next