Advertisement

ಎಸಿಸಿ ಕಾರ್ಮಿಕರಿಂದ ಜಾಗೃತಿ ಜಾಥಾ

07:05 AM Mar 07, 2019 | Team Udayavani |

ವಾಡಿ: ರಾಷ್ಟ್ರೀಯ ಸುರಕ್ಷತಾ ದಿನದ ನಿಮಿತ್ತ ಪಟ್ಟಣದ ಎಸಿಸಿ ಸಿಮೆಂಟ್‌ ಕಂಪನಿಯಲ್ಲಿ ನೂರಾರು ಕಾರ್ಮಿಕರು ಬುಧವಾರ ಬೆಳಗ್ಗೆ ಕಾರ್ಖಾನೆ ವಿವಿಧ ವಿಭಾಗಗಳಲ್ಲಿ ಜಾಥಾ ನಡೆಸುವ ಮೂಲಕ ಕೆಲಸದ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿ, ಅಪಘಾತ ನಿಯಂತ್ರಣ ಕುರಿತು ಘೋಷಣೆ ಕೂಗಿದರು.

Advertisement

ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಎಸಿಸಿ ಘಟಕ ಮುಖ್ಯಸ್ಥ ಕೆ.ಆರ್‌.ರೆಡ್ಡಿ, ಭಾರತ ಸ್ವಾತಂತ್ರ್ಯಾವಾದ ನಂತರ ದೇಶದಲ್ಲಿ ಸಾಕಷ್ಟು ಕಂಪನಿಗಳು ಸ್ಥಾಪನೆಯಾದವು. ಕೆಲಸದಲ್ಲಿ ಪಾಲಿಸಲಾದ ಅಸುರಕ್ಷತಾ ನಿಯಮಗಳಿಂದ ಪದೆ ಪದೇ ಅಪಘಾತಗಳು ಸಂಭವಿಸಿ ಕಾರ್ಮಿಕರು ಮೃತಪಡುವ ಪ್ರಸಂಗಗಳು ಹೆಚ್ಚಾದವು. 

ಬಾಬು ಜಗಜೀವನರಾಮ ಅವರು ಕೇಂದ್ರ ಸರಕಾರದಲ್ಲಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಕುರಿತು ವಿಶೇಷ ಚಿಂತನೆಗಳು ನಡೆದವು. ಕಾರ್ಖಾನೆಗಳಲ್ಲಿ ಘಟಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು 1966 ರಲ್ಲಿ ಕಾರ್ಮಿಕ ಸಮಿತಿ ಸ್ಥಾಪನೆಯಾಯಿತು. ಅಂದಿನಿಂದ ಪ್ರತಿ ವರ್ಷ ಮಾ.4 ರಂದು ರಾಷ್ಟ್ರೀಯ ಸುರಕ್ಷತಾ ದಿನವನ್ನಾಗಿ  ಚರಿಸಲಾಗುತ್ತಿದೆ ಎಂದರು. ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದು. ರಸ್ತೆ ಅಪಘಾತಗಳಿಂದ ಹೆಚ್ಚು ಸಾವು ನೋವುಗಳು ಸಂಭವಿಸುತ್ತಿವೆ. ಚಾಲಕರ ನಿರ್ಲಕ್ಷ್ಯವೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಮದ್ಯ ಸೇವನೆ ಮಾಡಿ ವಾಹನ ಸವಾರಿ ಹೊರಡುವುದರಿಂದ ಹಾಗೂ ಹೆಲ್ಮೆಟ್‌, ಬೆಲ್ಟ್ ಧರಿಸದೆ ಇರುವುದು ಪ್ರಾಣ ಹಾನಿಗೆ ಕಾರಣವಾಗುತ್ತದೆ. 

ಪ್ರತಿ ದಿನವೂ ನಮಗೆ ಸುರಕ್ಷತಾ ದಿನವಾಗಬೇಕು. ಸುರಕ್ಷತೆ ಕುರಿತು ಸರಕಾರ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರು ಮಾತ್ರ ನಿರ್ಲಕ್ಷಿಸುತ್ತಿದ್ದಾರೆ. ಕಾನೂನುಗಳು ಪ್ರಾಮಾಣಿಕವಾಗಿ ಜಾರಿಗೆ ಬಂದಾಗ ಮಾತ್ರ ಇದನ್ನು ತಡೆಯಬಹುದು ಎಂದು ವಿವರಿಸಿದರು.

ಎಸಿಸಿಯ ಆಪರೇಷನ್‌ ಹೆಡ್‌ ಜೀತೇಂದ್ರ ಕುಮಾರ, ಸುರಕ್ಷತಾ ವಿಭಾಗದ ಮುಖ್ಯಸ್ಥ ವಿ. ಶ್ರೀಕಾಂತ, ಕ್ಯಾಪ್ಟೀವ್‌ ಪವರ್‌ ಪ್ಲಾಂಟ್‌ (ಸಿಪಿಪಿ) ಮುಖ್ಯಸ್ಥ ಸಮರ್ಪಣ ದವನ್‌, ಇಲೆಕ್ಟ್ರಿಕಲ್‌ ಇನ್ಸೂಟ್ರೂಮೆಂಟೇಷನ್‌ ಮುಖ್ಯಸ್ಥ ಸುರೇಶ ಶೆಟ್ಟಿ, ಪ್ರಾಣೇಶ, ವೇಣುಗೋಪಾಲ, ಸೋಯಬ್‌, ಕೊಂಡ್ಲಿಬಾ ಭೋಸಲೆ, ನೀರಜ್‌ ಜೋಶಿ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next