Advertisement

ಇಂದು ಮಕ್ಕಳಿಗೆ ಪ್ರಶಸ್ತಿ ಪ್ರದಾನ

02:02 AM Jan 22, 2019 | Team Udayavani |

ಹೊಸದಿಲ್ಲಿ: ಅಪ್ರತಿಮ ಸಾಹಸಗೈದ 26 ಮಕ್ಕಳಿಗೆ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ರಾಷ್ಟ್ರೀಯ ಪುರಸ್ಕಾರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಪ್ರದಾನ ಮಾಡಲಿದ್ದಾರೆ. ಇಂಡಿಯನ್‌ ಕೌನ್ಸಿಲ್‌ ಫಾರ್‌ ಚೈಲ್ಡ್‌ ವೆಲ್‌ಫೇರ್‌ (ಐಸಿಸಿಡಬ್ಲ್ಯೂ) ಎಂಬ ಎನ್‌ಜಿಒ ಪ್ರತಿ ವರ್ಷ ನೀಡುತ್ತಿದ್ದ ಈ ಪ್ರಶಸ್ತಿಯ ಬದಲಿಗೆ, ಈ ಬಾರಿ ಕೇಂದ್ರ ಸರಕಾರವೇ ಪುರಸ್ಕಾರ ಮಾಡುತ್ತಿದೆ. ಹಣಕಾಸಿನ ಅವ್ಯವಹಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವೇ 26 ಮಕ್ಕಳನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಈ ಪುರಸ್ಕಾರಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಎಂದು ಹೆಸರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next