Advertisement
ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಅಧಿಕಾರಿಗಳು ತೆರೆಮರೆಯಲ್ಲಿ ಇರುತ್ತಾರೆ. ಅಂತಹವರನ್ನು ಗುರುತಿಸಿ, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ, ಪ್ರಶಸ್ತಿ ನೀಡಿ ಬೆನ್ನು ತಟ್ಟಿದರೆ ಅವರ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಎಸ್ಪಿ ಇಂತಹ ವಿಶಿಷ್ಟ ಯೋಜನೆ ಆರಂಭಿಸಿದ್ದಾರೆ.
Related Articles
Advertisement
ಯಾರನ್ನು ಆಯ್ಕೆ ಮಾಡ್ತಾರೆ? ಜಿಲ್ಲೆಯಲ್ಲಿನ 18 ಪೊಲೀಸ್ ಠಾಣೆಯಲ್ಲಿ ಹೆಚ್ಚು ಗ್ಯಾಂಬ್ಲಿಗ್ ಕೇಸ್ ದಾಖಲು ಮಾಡಿರುವ, ಜೂಜಾಟ, ಮಟ್ಕಾ ಕೇಸ್ ಮಾಡಿರುವ ಪೇದೆಗಳು ಹಾಗೂ 20 ದಿನಗಳಿಗೂ ಹೆಚ್ಚು ಕಾಲ ತಮ್ಮ ಕುಟುಂಬವನ್ನು ಬಿಟ್ಟು ದೂರದ ಪ್ರದೇಶಗಳಲ್ಲಿ ವಿವಿಧ ಬಂದೋಬಸ್ ನಲ್ಲಿ ಕರ್ತವ್ಯ ನಿರ್ವಹಿಸಿದ ಹಾಗೂ ದಾಖಲಾತಿ ಉತ್ತಮವಾಗಿ ನಿರ್ವಹಿಸುವ ಪೇದೆ, ಮುಖ್ಯ ಪೇದೆ ಹಾಗೂ ಎಎಸ್ಐ ಅವರನ್ನು ಗುರುತು ಮಾಡಿ ಅವರ ಹಿನ್ನೆಲೆಯನ್ನು ಗಮನಿಸಿ ನೇರವಾಗಿ ಎಸ್ಪಿ ಅವರೇ ಅಂತಹವರನ್ನು ಆಯ್ಕೆ ಮಾಡ್ತಾರೆ. ಬೆಸ್ಟ್ ಪ್ರಶಸ್ತಿಗೆ ಆಯ್ಕೆಯಾದ ಆರಕ್ಷಕರ ಫೋಟೋ ಹಾಗೂ ಅವರ ಸಾಧನೆಯನ್ನು ಠಾಣೆಗಳ ನೋಟಿಸ್ ಬೋರ್ಡ್ನಲ್ಲಿ ಪ್ರಕಟ ಮಾಡಲಾಗುತ್ತದೆ.
ಎಸ್ಪಿ ಅವರಿಂದ ಸನ್ಮಾನ: ಉತ್ತಮ ಆಡಳಿತಗಾರ ಎನ್ನುವ ಪ್ರತಿಯೊಬ್ಬ ಆರಕ್ಷಕನನ್ನು ಪ್ರತಿ ಠಾಣೆಯಿಂದ ಆಯ್ಕೆ ಮಾಡಿ ಅವರನ್ನು ಪ್ರತಿ ತಿಂಗಳು ಪರೇಡ್ ಗೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ವೇಳೆ ಎಲ್ಲ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಬೆಸ್ಟ್ ಆಡಳಿತಗಾರ ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಳೆದ 2 ತಿಂಗಳಲ್ಲಿ 10 ಆರಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ಎಸ್ಪಿ ಅವರೇ ನೇರವಾಗಿ ಸನ್ಮಾನಿಸಿ ಬೆನ್ನು ತಟ್ಟಿ ಕೆಲಸ ಮಾಡುವಂತೆ ಪ್ರೋತ್ಸಾಹ ನೀಡಿದ್ದಾರೆ.
ಒಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಎಸ್ಪಿ ಅರುಣಾಂಗ್ಷು ಗಿರಿ ಅವರು ಆಡಳಿತಕ್ಕೆ ವೇಗ ಹೆಚ್ಚಿಸಲು ಅವರಲ್ಲಿನ ಕಾರ್ಯಕ್ಷಮತೆ ಗುರುತಿಸಿ, ಪ್ರೋತ್ಸಾಹಿಸಲು ಬೆಸ್ಟ್ ಪರ್ಫಾರ್ಮೆನ್ಸ್ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು, ಆರಕ್ಷಕರಲ್ಲಿ ಖುಷಿ ತರಿಸಿದೆ. ಎಸ್ಪಿಯಿಂದ ಸನ್ಮಾನಗೊಳ್ಳುತ್ತಿರುವುದಕ್ಕೆ ಉಳಿದೆಲ್ಲ ಆರಕ್ಷಕರು ಕರ್ತವ್ಯದ ಮೇಲೆ ಹೆಚ್ಚು ನಿಗಾವಹಿಸಿದ್ದಾರೆ.
ಇಲಾಖೆಯಲ್ಲಿ ಪ್ರತಿ ತಿಂಗಳು ಪ್ರತಿ ಪೊಲೀಸ್ ಠಾಣೆಗಳಿಂದ ಬೆಸ್ಟ್ ಪರ್ಫಾರ್ಮೆನ್ಸ್ ತೋರುವ ಒಬ್ಬ ಪಿಸಿ, ಎಚ್ಸಿ ಹಾಗೂ ಎಎಸ್ಐ ಅವರನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ಆಡಳಿತದಲ್ಲಿ ವೇಗ ಹೆಚ್ಚಿಸಲು ಹಾಗೂ ಅವರು ಕೆಲಸದಲ್ಲಿ ಇನ್ನಷ್ಟು ತೊಡಗಲು ಇಂತಹ ಯೋಜನೆ ಆರಂಭಿಸಿದ್ದು, ಹೆಚ್ಚು ಜೂಜಾಟ, ಗ್ಯಾಂಬ್ಲಿಂಗ್, ಮಟ್ಕಾ ಕೇಸ್ ಮಾಡಿದವರನ್ನು ಹಾಗೂ ಬಹು ದಿನಗಳ ಕಾಲ ಬಂದೋಬಸ್ತ್ ನಲ್ಲಿ ತೊಡಗಿದವರನ್ನು ಆಯ್ಕೆ ಮಾಡುತ್ತಿದ್ದೇವೆ. –ಅರುಣಾಂಗ್ಷು ಗಿರಿ,ಕೊಪ್ಪಳ ಎಸ್ಪಿ
-ದತ್ತು ಕಮ್ಮಾರ