Advertisement

ಹಸ್ತಲಾಘವ ಮಾಡಬೇಡಿ: ಕ್ರೀಡಾಪಟುಗಳಿಗೆ ಕಿರಣ್‌ ರಿಜಿಜು ಸಲಹೆ

12:56 PM Mar 06, 2020 | keerthan |

ನವದೆಹಲಿ: ಕೊರೊನಾ ವೈರಸ್‌ನಿಂದ ವಿಶ್ವದಾದ್ಯಂತ ಆತಂಕ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಭಾರತೀಯ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು “ಯಾರೊಂದಿಗೂ ಹಸ್ತಲಾಘವ ಮಾಡಬೇಡಿ’ ಎಂದು ಕ್ರೀಡಾ ಪಟುಗಳಿಗೆ ಕಿವಿಮಾತು ಹೇಳಿದ್ದಾರೆ.

Advertisement

“ಕೊರೊನಾ ಬಗ್ಗೆ ಎಚ್ಚರಿಕೆಯಿಂದಿರಿ, ಕ್ರೀಡಾಪಟುಗಳೇ ಅಪರಿಚಿತರನ್ನು ಮಾತನಾಡಿಸುವಾಗ ಹುಷಾರಾಗಿರಿ, ಹಸ್ತಲಾಘವ ಮಾಡಬೇಡಿ, ಅಪ್ಪಿಕೊಳ್ಳುವುದು ಬೇಡ, ನಾವು ಭಾರತೀಯರು ಸಾಂಪ್ರದಾಯಿಕ ಶೈಲಿಯಲ್ಲಿ ನಮಸ್ತೆ ಮಾಡೋಣ, ಶುಭಾಶಯಗಳನ್ನು ತಿಳಿಸೋಣ’ ಎಂದು ರಿಜಿಜು ಹೇಳಿದ್ದಾರೆ.

ಕರೊನಾ ಭೀತಿಯಿಂದಾಗಿ ವಿಶ್ವದಲ್ಲಿ ಹಲವಾರು ಕ್ರೀಡಾಕೂಟಗಳು ರದ್ದಾಗುತ್ತಿದೆ. ಬ್ಯಾಂಕಾಕ್ ನಲ್ಲಿ ನಡೆಯಲಿರುವ ಏಷ್ಯಾಕಪ್ ಬಿಲ್ಗಾರಿಕೆಯಿಂದ ಭಾರತ ಹಿಂದೆ ಸರಿದಿದೆ. ರಕ್ಷಣೆಯ ಕಾರಣದಿಂದ ಕೊನೆಯ ಕ್ಷಣದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಕ್ರೀಡಾಪಟುಗಳಿಗೆ ತೆರಳದಂತೆ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next