Advertisement

ಹಿಮಪಾತ: ಮೂವರು ಯೋಧರಿಗೆ ಹುಡುಕಾಟ

03:45 AM Apr 07, 2017 | |

ಶ್ರೀನಗರ: ಜಮ್ಮೂ ಮತ್ತು ಕಾಶ್ಮೀರ ಕಣಿವೆಯಲ್ಲಿ ಸುರಿಯುತ್ತಿರುವ ಅನಿರೀಕ್ಷಿತ “ಏಪ್ರಿಲ್‌ ಹಿಮ ವರ್ಷ’ದ ಪರಿಣಮದಿಂದ, ಹಲವೆಡೆ ಹಿಮಪಾತ ಸಂಭವಿಸಿದ್ದು, ಲಡಾಕ್‌ನ ಬಟಾಲಿಕ್‌ ಸೆಕ್ಟರ್‌ನಲ್ಲಿನ ಸೇನಾ ಶಿಬಿರ ಹಿಮದಲ್ಲಿ ಮುಚ್ಚಿ ಹೋಗಿದೆ. 

Advertisement

ಈ ವೇಳೆ ಶಿಬಿರದಲ್ಲಿದ್ದ ಐದು ಸೈನಿಕರ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು, ಮೂವರು ಸೈನಿಕರು ನಾಪತ್ತೆಯಾಗಿದ್ದಾರೆ.  ಯೋಧರಿಗಾಗಿ ವಿಶೇಷ ರಕ್ಷಣಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿ ರುವುದಾಗಿ ಉತ್ತರ ಸೇನಾಪಡೆ ಟ್ವೀಟ್‌ ಮಾಡಿದೆ. ಅನಿರೀಕ್ಷಿತ ಹಿಮ ವರ್ಷ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮೂ ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಇದೇ ವೇಳೆ ಕಾರ್ಗಿಲ್‌ ಹಾಗೂ ಜಮ್ಮೂ ಮತ್ತು ಕಾಶ್ಮೀರ ಪ್ರಾಂತ್ಯಗಳಲ್ಲಿ ತೀವ್ರ ರೀತಿಯ ಅಪಾಯದ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. “”ಬರಾಮುಲ್ಲಾ, ಕುಪ್ವಾರ ಮತ್ತು ಬಂಡಿಪೋರ ಜಿಲ್ಲೆಗಳ ಇಳಿಜಾರು ಪ್ರದೇಶಗಳಲ್ಲಿ ಅಪಾಯದ ಮುನ್ನೆಚ್ಚರಿಕೆ ನೀಡಲಾಗಿದೆ,” ಎಂದು ಟ್ವೀಟ್‌ನಲ್ಲಿ  ಎಚ್ಚರಿಸಲಾಗಿದೆ.

ಧಾರಾಕಾರ ಮಳೆ
ಜಮ್ಮು-ಕಾಶ್ಮೀರದಲ್ಲಿ ಕಳೆದ 3 ದಿನ ಗಳಿಂದ ಹಿಮವರ್ಷ ಹಾಗೂ ಧಾರಾ ಕಾರ ಮಳೆಯಾಗು ತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ಜೇಲಂ ಹಾಗೂ ಥಾವಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಾ ಯದ ಮಟ್ಟ ತಲುಪುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮಧ್ಯ ಹಾಗೂ ದಕ್ಷಿಣ ಕಾಶ್ಮೀರದಲ್ಲಿ ಪ್ರವಾಹದ ಎಚ್ಚರಿಕೆಯನ್ನೂ ಹೊರಡಿಸಿದೆ. ಕೊಕೆರ್‌ನಾಗ್‌ನಲ್ಲಿ ಕಾರೊಂದು ಸ್ಕಿಡ್‌ ಆಗಿ ನದಿಗೆ ಬಿದ್ದ ಪರಿಣಾಮ ಇಬ್ಬರು ನಾಪತ್ತೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next