Advertisement

ಭಕ್ತ ಸಾಗರದ ನಡುವೆ ಅವಧೂತ ಶುಕಮುನಿಸ್ವಾಮಿಯವರ ರಥೋತ್ಸವ

10:17 PM Feb 20, 2023 | Team Udayavani |

ದೋಟಿಹಾಳ: ಗ್ರಾಮದ ಶ್ರೀ ಅವಧೂತ ಶುಕಮುನಿಸ್ವಾಮಿಯವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಸಂಜೆ 6.30 ಗಂಟೆಗೆ ಮಹಾರಥೋತ್ಸವ ಸಾವಿರಾರು ಭಕ್ತರ ಜಯಕಾರದ ಮಧ್ಯೆ ವಿಜೃಂಬಣೆಯಿಂದ ನಡೆಯಿತು.

Advertisement

ಸೋಮವಾರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮಕ್ಕೆ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ನಾನಾ ತರಹದ ಹರಕೆಯನ್ನು ತಾತನಿಗೆ ಭಕ್ತಿಯಿಂದ ಸಮರ್ಪಿಸಿದರು. ಜಾತ್ರೆಯ ಅಂಗವಾಗಿ ಸೋಮವಾರ ಬೆಳಿಗ್ಗೆ ದೇವಾಲಯದಲ್ಲಿ ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿದ ಧಾರ್ಮಿಕ ವಿಧಿ ವಿಧಾನಗಳು ಸೇರಿದಂತೆ ಇನ್ನಿತರ ಪೂಜಾ ಕಾರ್ಯಕ್ರಮಗಳನ್ನು ಮಠದಲ್ಲಿ ನಡೆದವು.

ಬೆಳಿಗ್ಗೆ ಕಳೆದ ಏಳು ದಿನಗಳಿಂದ ಆರಂಭವಾದ ಸಪ್ತಭಜನೆ ಇಂದು ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠಕ್ಕೆ ಆಗಮಿಸಿ ಸಪ್ತಭಜನೆ ಮುಕ್ತಾಯಗೊಳ್ಳಿಸಿದ್ದರು. ನಂತರ ರಥದ ಮುಂದೆ ಹೋಮ ಹವನಗಳು ಹಾಗೂ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀ ರುದ್ರಮುನಿಸ್ವಾಮಿ ಮತ್ತು ಈಶ್ವರಸ್ವಾಮಿ ದೇವಾಂಗಮಠ ಇವರ ಸಮ್ಮುಖದಲ್ಲಿ ನೆರವೇರಿದವು. ಶುಕಮುನಿಸ್ವಾಮಿಗಳ ಜಾತ್ರೆಯ ನಿಮಿತ್ಯ ಸುತ್ತಮುತ್ತಲಿನ ಗ್ರಾಮದ ಭಕ್ತರು ಉರುಳುಸೇವೆ, ದೀಡ್ ನಮಸ್ಕಾರ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಮಠದ ಆವರಣದಲ್ಲಿ ನಡೆದಿರುವದು ಕಂಡು ಬಂತು.

ಸಂಜೆ ರಥೋತ್ಸವ ಜರುಗುವ ಮೊದಲು ಶುಕಮುನಿ ತಾತನವರ ಪಲ್ಲಕ್ಕಿ ಕೇಸೂರ, ದೋಟಿಹಾಳ ಗ್ರಾಮಗಳಲ್ಲಿ ಸಂಚರಿಸಿ ರಥದ ಬೀದಿಗೆ ಪ್ರವೇಶ ಮಾಡುವಾಗ ಭೂತಾಯಿಗೆ ಭಲಿ ಅನ್ನವನ್ನು ಸಮರ್ಪಣೆ ಮಾಡುವ ಮುಖಾಂತರ ರಥದ ಬೀದಿಯಲ್ಲಿ ಪಲ್ಲಕ್ಕಿಯು ಸಂಚರಿಸಿತು. ನಂತರ ಸಾವಿರಾರು ಭಕ್ತರ ಜಯ ಘೋಷಣೆಗಳೊಂದಿಗೆ ಶ್ರೀ ಅವಧೂತ ಶುಕಮುನಿಸ್ವಾಮಿಗಳ ಮಹಾರಥವನ್ನು ಎಳೆದರು.
ತಾಲೂಕಿನ ರಾಜಕೀಯ ಪಕ್ಷಗಳ ಮುಖಂಡರು ಜಾತ್ರೆಯ ನಿಮಿತ್ಯ ಸೋಮವಾರ ಮಠಕ್ಕೆ ಭೇಟಿ ನೀಡಿ ತಾತನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ರಥೋತ್ಸವ ಸಮಯದಲ್ಲಿ ತಹಶೀಲ್ದಾರ ರಾಘವೇಂದ್ರ ರಾವ್, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಶಾಸಕ ಹಸನಸಾಬ ದೋಟಿಹಾಳ, ಮಾಜಿ ಜಿಪಂ ಸದಸ್ಯರಾದ ಸದಸ್ಯ ಕೆ.ಮಹೇಶ, ಮಾಜಿ ತಾಪಂ ಸದಸ್ಯ ಮಹಾಂತೇಶ ಬಾದಾವಿ, ಯಂಕಪ್ಪ ಚವ್ಹಾಣ, ದೋಟಿಹಾಳ, ಕೇಸೂರ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಪಿಡಿಒ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ, ಗ್ರಾಮಲೆಕ್ಕಾಧಿಕಾರಿಗಳು, ಸೇರಿದಂತೆ ಇನ್ನಿತರ ಮುಖಂಡರು, ಉಪಸ್ಥಿತಿರಿದ್ದರು. ಈ ಜಾತ್ರೆಯಲ್ಲಿ ಬಾಗಲಕೋಟಿ, ವಿಜಯಪೂರ, ರಾಯಚೂರ, ಕೊಪ್ಪಳ, ಗದಗ, ಬಳ್ಳಾರಿ ಜಿಲ್ಲೆಗಳಿಂದ ಮತ್ತು ಸುತ್ತಮುತ್ತಲಿನ ಇಲಕಲ್, ಹುನಗುಂದ, ಹನಮಸಾಗರ, ಕಂದಗಲ್, ಮುದೇನೂರು, ತಾವರಗೇರಾ ಅಲ್ಲದೆ ಗ್ರಾಮಗಳ ಸುತ್ತಲಿನ ಗ್ರಾಮಗಳಿಂದ 40ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವ ಸಂಧರ್ಭದಲ್ಲಿ ಕುಷ್ಟಗಿ ಸಿಪಿಐಯವರು ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದರು.

Advertisement

ಚಿತ್ತ ಬಂದು ಕಡೆ ತಿರುಗು ಮುತ್ಯಾನ ಪಲ್ಲಕ್ಕಿ 

ಮಠದಲ್ಲಿ ಜಾತ್ರಾ ಮಹೋತ್ಸವದ ವೇಳೆ ಸಪ್ತಭಜನೆ ಪ್ರಾರಂಭವಾದ ಮೇಲೆ ಏಟು ದಿನಗಳ ಕಾಲ ಗ್ರಾಮದಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಎರಡು ಭಾರಿ ಪಲ್ಲಕ್ಕಿ ಉತ್ಸವ ಪ್ರಾರಂಭವಾಗುತ್ತದೆ. ಆರಂಭವಾದ ದಿನ ಪಲ್ಲಕ್ಕಿ ನೇರವಾಗಿ ಹಳ್ಳಕ್ಕೆ ಹೊದರೆ ಈ ವರ್ಷ ಉತ್ತಮ ಮಳೆ ಬರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.

ಜಿಲ್ಲೆಯಲ್ಲಿ ಅತಿ ದೊಡ್ಡ ಎರಡನೇ ಜಾತ್ರೆ ಎಂಬ ಹೆಗ್ಗಳಿಕೆ ದೋಟಿಹಾಳ ಗ್ರಾಮದು. ಈ ಗ್ರಾಮದಲ್ಲಿ ಸುಮಾರು ಏಟು ದಿನಗಳ ಕಾಲ ನಡೆಯುವ ತಾತನ ಪಲ್ಲಕ್ಕಿ ಮೆರವಣಿಗೆ ನೋಡಿ ಒಂದು ಸೌಭಾಗ್ಯವಾಗಿದೆ ಎಂಬುವದು ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಜನತೆಯ ಆಸೆಯು ಆಗಿದೆ. ಈ ಪಲ್ಲಕ್ಕಿ ನೋಡಲೆಂದೇ ದೂರದ ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ಗದಗ, ಹುಬ್ಬಳ್ಳಿ ಸೇರಿದಂತೆ ಅನೇಕೆ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ತಾತನ ಜಾತ್ರೆ ಆರಂಭಕ್ಕೆ ಏಟು ದಿನ ಮುಂಚಿತವಾಗಿ ತಾತನವರ ಪಲ್ಲಕ್ಕಿ ಉತ್ಸವ ಆರಂಭವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next