Advertisement

Manipal ಆಟೋರಿಕ್ಷಾ ಢಿಕ್ಕಿ: ಪಾದಚಾರಿಗೆ ಗಾಯ

12:13 AM Sep 05, 2023 | Team Udayavani |

ಮಣಿಪಾಲ: ಆಟೋರಿಕ್ಷಾ ಢಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡ ಘಟನೆ ನಡೆದಿದೆ.

Advertisement

ಅಶೋಕ ನಾಯ್ಕ ಅವರು ಪರ್ಕಳದ ಮೀನು ಮಾರುಕಟ್ಟೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಟೋ ರಿಕ್ಷಾ ಚಾಲಕ ಕೃಷ್ಣ ಶೆಟ್ಟಿ ಎಂಬಾತ ತನ್ನ ಆಟೋರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಢಿಕ್ಕಿ ಹೊಡೆದಿದ್ದಾನೆ.

ಈ ವೇಳೆ ಅವರು ರಸ್ತೆಗೆ ಬಿದ್ದ ಪರಿಣಾಮ ಅವರ ಬಲ ಕಾಲಿನ ಮೊಣ ಕಾಲ ಬಳಿ ರಕ್ತಗಾಯವಾಗಿ ಮೂಳೆ ಮುರಿತವಾಗಿದೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next