ಆಟೋಮೊಬೈಲ್ ಉತ್ಪಾದನಾ ಘಟಕಗಳು ಇರದಿದ್ದರೂ, ಮಾರಾಟ ಹಾಗೂ ಸೇವಾ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಉಂಟು ಮಾಡಿದೆ.
Advertisement
ಜಿಲ್ಲೆಯಲ್ಲಿ ಆಗಿರುವ ನಷ್ಟ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಿಂದ ಜಿಲ್ಲೆಯಲ್ಲಿ ಸುಮಾರು 550-570 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ದ್ವಿಚಕ್ರ ವಾಹನ, ಕಾರು, ಲಾರಿ, ಟ್ರ್ಯಾಕ್ಟರ್ ಸೇರಿ 500 ಕೋಟಿ ರೂ. ವಹಿವಾಟು ನಡೆಯುತ್ತಿದ್ದರೆ, 50 ಕೋಟಿ ರೂ. ಬಿಡಿಭಾಗಗಳ ವಹಿವಾಟು ಹಾಗೂ ಸುಮಾರು 20 ಕೋಟಿ ರೂ. ಸೇವಾ ಕ್ಷೇತ್ರಕ್ಕೆ ಆಗಿರುವ ನಷ್ಟ. ಅಧಿಕೃತ ಮಾರಾಟ ಹಾಗೂ ಸೇವಾ ವಲಯದಲ್ಲಿ ಇಷ್ಟು ನಷ್ಟವಾದರೆ, ಇನ್ನೂ ಅಸಂಘಟಿತ ವಲಯಕ್ಕೂ ಭಾರೀ ಪ್ರಮಾಣದ ನಷ್ಟವಾಗಿದೆ ಎಂದು ಕ್ಷೇತ್ರದ ತಜ್ಞರು ಅಂದಾಜಿಸಿದ್ದಾರೆ.
ಸ್ಥಿತಿಯತ್ತ ಕೊಂಡೊಯ್ಯುತ್ತಿದೆ. ಡೀಲರ್ಗಳ ವರ್ಕ್ಶಾಪ್ ಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹೊರಗಡೆ ಇನ್ನೂ ಅಂತಹ
ಲಕ್ಷಣಗಳು ಇಲ್ಲ.
Related Articles
ಉತ್ಪಾದನೆ ಹಾಗೂ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರ ಕೊರತೆಯಿಂದ ಅಗತ್ಯ ಬೇಡಿಕೆ ಈಡೇರಿಸದ ಸ್ಥಿತಿ
ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಜಿಲ್ಲೆಯಲ್ಲಿರದಿದ್ದರೂ ವಾಹನಗಳು ಹಾಗೂ ಬಿಡಿ ಭಾಗಗಳ ಉತ್ಪನ್ನ ಘಟಕಗಳಲ್ಲಿ
ಕಾರ್ಮಿಕರ ಕೊರತೆಯಿದೆ.
Advertisement
ಇದನ್ನೂ ಓದಿ:ಗುಡ್ ನ್ಯೂಸ್:ರೈಲು ಹೊರಡುವ 5 ನಿಮಿಷದ ಮೊದಲು ಟಿಕೆಟ್ ಬುಕ್ ಮಾಡಬಹುದು: ಏನಿದು ಹೊಸ ನೀತಿ
ಬಿಡಿಭಾಗ ಪೂರೈಕೆ ಆತಂಕಚೀನಾ ಹಾಗೂ ಭಾರತ ನಡುವಿನ ಬಾಂಧವ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆಮದು ಹಾಗೂ ರಫ್ತು ಮೇಲೆ ಕಡಿವಾಣ ಹೇರಲಾಗಿದೆ. ಇದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಅದರಲ್ಲೂ ಬಿಡಿ ಭಾಗಗಳ ಪೂರೈಕೆ ಮೇಲೆ ದೊಡ್ಡ ಪರಿಣಾಮ
ಬೀರಲಿದೆ ಎಂದು ಅಂದಾಜಿಸಲಾಗಿದೆ. ಇದೀಗ ದಾಸ್ತಾನು ಇರುವ ಬಿಡಿಭಾಗಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಚೀನಾದಿಂದ ಆಮದಾಗುತ್ತಿದ್ದ ಬಿಡಿ ಭಾಗಗಳ ಬೆಲೆ ಹಾಗೂ ಉತ್ಪಾದನಾ ಸಾಮರ್ಥ್ಯ ದೇಶದಲ್ಲಿಲ್ಲ ಎನ್ನುವ ಆತಂಕವಿದೆ. – ಹೇಮರಡ್ಡಿ ಸೈದಾಪುರ