Advertisement

ಆಟೋ -ಲಾರಿ ಡಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ

09:11 AM Oct 20, 2019 | Team Udayavani |

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಪಾವಗಡ ರಸ್ತೆಯ ಕಸ್ತೂರಿ ತಿಮ್ಮನಹಳ್ಳಿ ಕ್ರಾಸ್ ಬಳಿ ಆಪೇ ಆಟೋ ಹಾಗೂ ಈಚರ್ ಲಾರಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

Advertisement

ಭಾನುವಾರ ಬೆಳಗಿನ ಜಾವ ಮೀರಸಾಬೀಹಳ್ಳಿಯಿಂದ ಚಳ್ಳಕೆರೆಗೆ ತರಕಾರಿ ಹೊತ್ತು ತರುತ್ತಿದ್ದ ಆಪೇ ಆಟೋಗೆ ಈಚರ್ ಲಾರಿಗೆ ಡಿಕ್ಕಿಯಾಗಿದೆ.

ಈ ವೇಳೆ ಮೀರಸಾಬೀಹಳ್ಳಿಯ ಕುಮಾರ್ (37) ಸ್ಥಳದಲ್ಲೆ ಮೃತಪಟ್ಟಿದ್ದು, ಆಟೋದಲ್ಲಿದ್ದ ಗೊವಿಂದು, ಗಂಗಮ್ಮ ಹಾಗೂ ಪ್ರಸಾದ್ ಎಂಬುವವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next