Advertisement

ಆಟೊ ಚಾಲಕರು ಪರಿಹಾರಕ್ಕೆ ಬೆಂಗಳೂರಿಗೆ ಬರಬೇಕಿಲ್ಲ: ಸವದಿ

08:06 AM May 07, 2020 | Sriram |

ಬೆಂಗಳೂರು: ರಾಜ್ಯ ಸರ್ಕಾರ ಆಟೊ ಚಾಲರಿಗೆ ನೀಡಿರುವ ಸಹಾಯಧನ ಪಡೆಯಲು ಯಾವ ಆಟೊ ಚಾಲಕರು ಬೆಂಗಳೂರಿಗೆ ಬರುವ ಅಗತ್ಯವಿಲ್ಲ. ಸರ್ಕಾರವೇ ಸೂಕ್ತ ಮಾರ್ಗಸೂಚಿ ರೂಪಿಸಿ ಚಾಲಕರಿಗೆ ಅವರ ನೆರವಿನ ಹಣ ತಲುಪಿಸಲಾಗುವುದು ಎಂದು ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದ 7 ಲಕ್ಷ 75 ಸಾವಿರ ಆಟೊ ಚಾಲಕರು ಕೋವಿಡ್ 19 ಲಾಕ್‌ ಡೌನ್‌ ನಿಂದ ಸಂಕಷ್ಟಕ್ಕೆ ಸಿಲುಕಿದ್ದರಿಂದ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ 5 ಸಾವಿರ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಆದರೆ, ಅನೇಕ ಆಟೊ ಚಾಲಕರು ಅರ್ಜಿ ಸಲ್ಲಿಸಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕೆಲವರು ಸಾರಿಗೆ ಇಲಾಖೆಗೆ ಅರ್ಜಿ ಬರೆಯುತ್ತಿದ್ದಾರೆ. ಯಾರೂ ಅನಗತ್ಯ ಹಣ ವ್ಯಯ ಮಾಡಿಕೊಳ್ಳಬಾರದು. ಸರ್ಕಾರ ಸೂಕ್ತ ಮಾರ್ಗಸೂಚಿ ರಚಿಸಿ ಹಣ ತಲುಪಿಸುತ್ತದೆ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next