Advertisement

ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ

04:50 PM Nov 13, 2019 | Suhan S |

ತುಮಕೂರು: ದಲಿತರ ಕುಂದು ಕೊರತೆ ಸಭೆಯನ್ನು ಅಧಿಕಾರಿಗಳು ಕಾಟಾಚಾರದ ಸಭೆ ಎಂದು ಕೊಂಡಿದ್ದಾರೆ. ದಲಿತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಚಿಲುಮೆ ಪೊಲೀಸ್‌ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಏರ್ಪ ಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಹಾಗೂ ಕುಂದುಕೊರತೆ ಸಮಿತಿ ಸಭೆ ಆರಂಭ ವಾಗುತ್ತಲೇ ದಲಿತ ಮುಖಂಡರು, 2015-16 ರಲ್ಲಿ 7 ತಾಲೂಕುಗಳಲ್ಲಿ ದಲಿತರಿಗೆ ಸ್ಮಶಾನ ನಿರ್ಮಿಸಲು ತೀರ್ಮಾನಿಸಲಾಗಿದೆ. ಈವರೆಗೂ ಆಗಿಲ್ಲ ಎಂದು ದೂರಿದರು.

ಕಟ್ಟಿಂಗ್‌ ಶಾಪ್‌ನಲ್ಲಿ ದಲಿತರಿಗೆ ಕಟ್ಟಿಂಗ್‌ ಮಾಡಲ್ಲ ಎನ್ನುತ್ತಾರೆ. ಕೆಲವು ಕಡೆ ದೇವಾಲಯ ಪ್ರವೇಶ ಇಲ್ಲ, ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಎಷ್ಟು ಸಭೆಗಳಲ್ಲಿ ನಾವು ಕೇಳುವುದು ಎಂದು ಜಿ.ಪಂಸದಸ್ಯ ವೈ.ಎಚ್‌ಹುಚ್ಚಯ್ಯ, ದಲಿತ್‌ ನಾರಾಯಣ್‌ ಅಸಮಾಧಾನ ವ್ಯಕ್ತಪಡಿಸಿದರು.

ಸೌಲಭ್ಯ ಶೀಘ್ರ: ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಮಾತ ನಾಡಿ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ದವರಿಗೆ ಸ್ಮಶಾನ ಭೂಮಿ ಗುರುತಿಸಿ ಸೌಲಭ್ಯ ಶೀಘ್ರ ಒದಗಿಸ ಲಾಗುವುದು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿಸಿ ನೀಡಲಾಗುವುದು ಎಂದು ತಿಳಿಸಿದರು. ಗೂಳೂರು, ಹೆಗ್ಗೆರೆ, ಹರಳೂರು ಗ್ರಾಪಂ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ವರ್ಗಗಳ ಕಾಮಗಾರಿಗೆ ಅನುದಾನ ಸರಿಯಾಗಿ ಬಳಸಿಲ್ಲ ಎಂದು ದಲಿತ ಮುಖಂಡರೊಬ್ಬರು ತಿಳಿಸಿದಾಗ, ಉತ್ತರಿಸಿದ ಜಿಲ್ಲಾಧಿಕಾರಿ, ಈ ಕುರಿತು ತನಿಖೆ ನಡೆಸಲಾಗುವುದು ಎಂದರು.

ಪಾವಗಡ ತಾಲೂಕಿನ ಹಲವು ಗ್ರಾಪಂಗಳಲ್ಲಿ ಸ್ಮಶಾನ ಭೂಮಿ ಒತ್ತುವರಿ ಮಾಡಿರುವ ದೂರು ಬಂದಿವೆ. ಕೂಡಲೇ ಇಒಗಳು ಹಾಗೂ ತಹಶೀಲ್ದಾರ್‌ಗಳು ಸ್ಥಳ ಹಾಗೂ ದಾಖಲೆ ಪರಿಶೀಲಿಸಿ ಕ್ರಮ ತೆಗೆದು ಕೊಳ್ಳಬೇಕೆಂದು ಸೂಚಿಸಿದರು. ಮಧುಗಿರಿ ನಗರದಲ್ಲಿ ನಗರಸಭೆ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿಲ್ಲ. ಹೈಕೋರ್ಟ್‌ ಆದೇಶ ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

Advertisement

ಕೂಡಲೇ ಅಂಗಡಿ ಮಳಿಗೆ ಹರಾಜು ಪ್ರಾರಂಭಿಸಿ, ದಲಿತ ಸಮುದಾಯಕ್ಕೆಂದು ಮೀಸಲಿರುವ ಅಂಗಡಿ ನೀಡುವಂತೆ ಡೀಸಿ ಅಧಿಕಾರಿಗಳಿಗೆ ಸೂಚಿಸಿದರು. ಸ್ಮಶಾನ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಗುಬ್ಬಿ ತಾಲೂಕಿನ ಸಿ.ಎಸ್‌ ಪುರ, ಕಲ್ಲೂರು ಹಾಗೂ ನಂದಿಹಳ್ಳಿಯಲ್ಲಿ ಸ್ಮಶಾನ ಭೂಮಿ ಅಭಿವೃದ್ಧಿ ಪೂರ್ಣಗೊಂಡಿಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿ ಪ್ರಶ್ನೆಗೆ ಉತ್ತರಿಸಿದ ಗುಬ್ಬಿ ತಹಶೀಲ್ದಾರ್‌, ಕಾಮಗಾರಿ ಆರಂಭವಾಗಿದ್ದು, ನಂದಿಹಳ್ಳಿ ಗ್ರಾಮದ ಸ್ಮಶಾನ ಭೂಮಿ ಪಕ್ಕದ ಜಮೀನಿನವರು ಉಳುಮೆ ಮಾಡಿ ತೆಂಗಿನ ಸಸಿ ನೆಟ್ಟಿದ್ದಾರೆ. ಈ ಬಗ್ಗೆ ಜಮೀನಿ ನವರಿಗೆ ತಿಳಿಸಿದ್ದು, ತೆರವುಗೊಳಿಸಿದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಜಿಪಂ ಸಿಇಒ ಶುಭಾ ಕಲ್ಯಾಣ್‌, ಎಸ್‌ಪಿ ಡಾ.ಕೋ. ನಂ.ವಂಶಿಕೃಷ್ಣ, ಉಪವಿಭಾಗಾಧಿಕಾರಿಗಳಾದ ಶಿವ ಕುಮಾರ್‌, ಕೆ.ಆರ್‌.ನಂದಿನಿ, ಸಮಾಜ ಕಲ್ಯಾಣಇಲಾಖೆ ಜಂಟಿ ನಿರ್ದೇಶಕ ಪ್ರೇಮ್‌ನಾಥ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ದಲಿತ ಮುಖಂಡ ರಾದ ಪಿ.ಎನ್‌.ರಾಮಯ್ಯ ಇತರರಿದ್ದರು.

 

ಗೊಂದಲದ ಗೂಡು:  ದಲಿತರ ಕುಂದುಕೊರತೆ ಸಭೆ ಪ್ರಾರಂಭದಿಂದ ಮುಗಿಯುವವರೆಗೂ ಗೊಂದಲದ ಗೂಡಾಗಿತ್ತು. ಸರಿಯಾಗಿ ಮೈಕ್‌ ಕೇಳುತ್ತಿರಲಿಲ್ಲ, ಯಾರು ಏನು ಮಾತನಾಡುತ್ತಾರೆ, ಅಧಿಕಾರಿಗಳು ಏನು ಉತ್ತರ ನೀಡುತ್ತಾರೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ಕೆಲವರಿಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ, ಒಟ್ಟಾರೆ ಸಭೆ ನಡೆಯಿತು ಎನ್ನುವಂತೆ ದಲಿತರ ಸಭೆ ನಡೆಸಲಾಯಿತು.

ವಸತಿಗೆ ಭೂಮಿ ಗುರುತಿಸಿಲ್ಲ:  ಮಧುಗಿರಿ ಪುರಸಭೆಯಲ್ಲಿ 53 ಪೌರ ಕಾರ್ಮಿಕರಿದ್ದಾರೆ. ಪಾವಗಡದಲ್ಲಿ 43 ಮಂದಿ ಕೆಲಸ ಮಾಡುತಿದ್ದು, ಸರಿಯಾಗಿ ವೇತನ ನೀಡುತ್ತಿಲ್ಲ, ವಸತಿಗೆ ಭೂಮಿ ಗುರುತಿಸಿಲ್ಲ ಎಂದು ಕೊಳೆಗೇರಿ ಸಮಿತಿಯ ಎ.ನರಸಿಂಹಮೂರ್ತಿ ದೂರಿದರು. ಇದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿ, ಎಲ್ಲ ತಾಲೂಕು ಗಳಲ್ಲಿಯೂ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ದಲಿತರಿಗೆ ಪ್ರವೇಶವಿಲ್ಲ:  ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ ಗ್ರಾಮದಲ್ಲಿ ಕ್ಷೌರದ ಅಂಗಡಿಗಳಿಗೆ ದಲಿತರಿಗೆ ಪ್ರವೇಶವಿಲ್ಲ ಎಂದು ದಲಿತರೊಬ್ಬರು ಸಭೆಗೆ ದೂರು ನೀಡಿದರು. ದೇವಾಲಯ, ಹೋಟೆಲ್‌, ಅಂಗಡಿ, ಕ್ಷೌರದ ಅಂಗಡಿಗಳಿಗೆ ದಲಿತರಿಗೆ ಪ್ರವೇಶ ನೀಡದಿರುವವರಿಗೆ ಮೊದಲು ಅರಿವು ಮೂಡಿಸಬೇಕು. ಸ್ಪಂದಿಸದಿದ್ದರೆ ದೂರು ದಾಖಲಿಸಿ ಎಂದು ಅಧಿಕಾರಿಗಳಿಗೆ ಡೀಸಿ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next