Advertisement

ಲೇಖಕ ಗಂಗಾಧರಯ್ಯಗೆ ವರ್ಷದ ಲೇಖಕ ಪ್ರಶಸ್ತಿ

11:37 PM Oct 18, 2019 | Lakshmi GovindaRaju |

ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ನೀಡುವ 2018ನೇ ಸಾಲಿನ “ವರ್ಷದ ಲೇಖಕ’ ಪ್ರಶಸ್ತಿಗೆ ಬರಹಗಾರ ಎಸ್‌.ಗಂಗಾಧರಯ್ಯ ಅವರು ಆಯ್ಕೆಯಾಗಿದ್ದಾರೆ. ಗಂಗಾಧರಯ್ಯ ಅವರು ರಚಿಸಿರುವ “ದೇವರ ಕುದುರೆ’ (ಕಥಾ ಸಂಕಲನ)ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿ 20 ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಹಾಗೆಯೇ ವರ್ಷದ “ಯುವ ಲೇಖಕ’ ಪ್ರಶಸ್ತಿಗೆ ಶ್ರೀಧರ ಬನವಾಸಿ ಅವರ “ವೃಕ್ಷಮಾತೆ ತಿಮ್ಮಕ್ಕ’ (ನಾಟಕ)ಕೃತಿ ಆಯ್ಕೆಯಾಗಿದೆ.

Advertisement

ಪ್ರಶಸ್ತಿ 10 ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. “ವರ್ಷದ ಪ್ರಕಾಶಕ’ ಪ್ರಶಸ್ತಿಗೆ ಮೈಸೂರಿನ ಭಾರತೀ ಪ್ರಕಾಶನದ ಬಿ.ಎನ್‌.ಶ್ರೀನಿವಾಸ್‌ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ 20 ಸಾವಿರ ರೂ.ನಗದು ಮತ್ತು ಪ್ರಶಸ್ತಿ ಫ‌ಲಕ ಒಳಗೊಂಡಿದೆ. ಅ.25ರಂದು ಮಂಡ್ಯದ ಕರ್ನಾಟಕ ಸಂಘದ ಕೆ.ವಿ.ಶಂಕರೇಗೌಡ ಶತಮಾನೋತ್ಸವ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next