Advertisement

ಆಸ್ಟ್ರೇಲಿಯ: ಪುತ್ತಿಗೆ ಶ್ರೀಗಳಿಗೆ ಅಭಿನಂದನೆ

11:03 AM Jan 29, 2018 | Team Udayavani |

ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಸ್ಟ್ರೇಲಿಯಕ್ಕೆ ಭೇಟಿ ನೀಡಿದ ಸಂದರ್ಭ ಕ್ವೀನ್ಸ್‌ಲಂಡ್‌ ಬ್ರಿಸ್ಬೇನ್‌ನಲ್ಲಿ ಬ್ಲೇರ್‌ ಸಂಸದ್‌ ಸದಸ್ಯ, ಸಚಿವ ಶಯೆನ್‌ ನ್ಯೂಮನ್‌ ಅವರು ಬುಧವಾರ ಅಭಿನಂದಿಸಿದರು. ಅವರಿಬ್ಬರೂ ಆಸ್ಟ್ರೇಲಿಯಾದ ಅಭಿವೃದ್ಧಿಯಲ್ಲಿ ಭಾರತೀಯ ಸಮುದಾಯದವರು ಸಲ್ಲಿಸಿದ ಕೊಡುಗೆ ಬಗ್ಗೆ ಚರ್ಚಿಸಿದರು. ಭಾರತದಿಂದ ಬಂದವರು ಎದುರಿಸುತ್ತಿರುವ ಸಮಸ್ಯೆಗಳು, ವಿವಿಧ ನೀತಿಗಳು ಭಾರತೀಯ ಸಮುದಾಯದ ಮೇಲೆ ಆಗುತ್ತಿ ರುವ ಪರಿಣಾಮಗಳ ಕುರಿತು ಸ್ವಾಮೀಜಿ ವಿವರಿಸಿದರು.

Advertisement

ಸಚಿವರು ಸ್ವಾಮೀಜಿಯವರಿಗೆ ದೇವಿ ಜಗನ್ಮಾತೆಯ ಚಿತ್ರವಿರುವ ಸ್ಮರಣಿಕೆ ನೀಡಿ ಗೌರವಿಸಿದರು. ಸಚಿವರನ್ನು ಸ್ವಾಮೀಜಿ ಉಡುಪಿಗೆ ಆಹ್ವಾನಿಸಿದರು. ಉಭಯ ಸಮುದಾಯದವರನ್ನು ಒಂದುಗೂಡಿಸುವ ಸ್ವಾಮೀಜಿಯವರ ಪ್ರಯತ್ನವನ್ನು ಸಚಿವರು ಶ್ಲಾ ಸಿದರು. ಆಸ್ಟ್ರೇಲಿಯಕ್ಕೆ ಆಗಾಗ್ಗೆ ಬಂದು ಧಾರ್ಮಿಕ ಸಂದೇಶವನ್ನು ಬಿತ್ತರಿಸಬೇಕೆಂದು ಸಚಿವರು ವಿನಂತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next