Advertisement

ʼರಾಜಕುಮಾರ’ಸಿನಿಮಾ ಉಚಿತ ಪ್ರದರ್ಶನ

05:13 PM Nov 01, 2021 | Team Udayavani |

ಮಧುಗಿರಿ: ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ನಿಧನದಿಂದ ಹಲವಾರು ಅಭಿಮಾನಿ ಗಳಿಗೆ ಮಾನಸಿಕ ನೋವಾಗಿದೆ. ಅವರ ನೆನಪಿಗಾಗಿ ಪಟ್ಟಣದ ಶಂಕರ್‌ ಚಿತ್ರಮಂದಿರದಲ್ಲಿ ಸೋಮವಾರದಿಂದ- ಗುರುವಾರದವರೆಗೂ ಉಚಿತವಾಗಿ ಚಿತ್ರ ಪ್ರದರ್ಶನ ನಡೆಸಲಾಗುವುದೆಂದು ಕನ್ನಡ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಕೇಬಲ್‌ ಸುಬ್ಬು ತಿಳಿಸಿದರು.

Advertisement

ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ 4 ಪ್ರದರ್ಶನಗಳಿದ್ದು, 4 ದಿನ ಚಿತ್ರ ಪ್ರದರ್ಶನ ಇರಲಿದೆ. ಪುನೀತ್‌ ರಾಜಕುಮಾರ್‌ ಚಿತ್ರದಲ್ಲಿ ಮಾತ್ರ ನಾಯಕರಾಗದೆ, ಜಿನ ಜೀವನದಲ್ಲೂ ನಮ್ಮ ಈ ಸಮಾಜದ ನಾಯಕ ರಾಗಿದ್ದಾರೆ.

ಇದನ್ನೂ ಓದಿ;- ಗೋವಾ: ನರಕಾಸುರನ ದಹನಕ್ಕೆ ಭರ್ಜರಿ ಸಿದ್ದತೆ

ಅದಕ್ಕೆ ಅವರ ಜನಸೇವೆಯೇ ಸಾಕ್ಷಿಯಾಗಿದ್ದು, ಅವರು ನಮ್ಮೆಲ್ಲರ ಮನದಲ್ಲಿ ಅಮರರಾಗಿದ್ದಾರೆ. ಅವರ ಗುಣಗಳನ್ನು ಯುವ ಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ತಾಲೂಕು ರಾಜಕುಮಾರ್‌ ಅಭಿಮಾನಿ ಬಳಗದ ಅಧ್ಯಕ್ಷ ಸೈಯದ್‌ ಕರೀಂ, ಪುರಸಭಾ ಸದಸ್ಯ ಮಂಜುನಾಥಾಚಾರ್‌, ಮುಖಂಡರಾದ ರಾಮು, ಅನಂತ ನಾರಾಯಣಬಾಬು, ಸುಧೀರ್‌, ಶಿವಕುಮಾರ್‌, ರಾಘವೇಂದ್ರ, ನಾಗೇಂದ್ರ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next