Advertisement

ಅತ್ತೆ, ಮಾವನ ಕೊಂದ್ರೆ ಹೆಂಡತಿ ಸಿಗ್ತಾಳೆ ಅಂದ್ಕೊಂಡೆ

11:35 AM Mar 05, 2017 | |

ಬೆಂಗಳೂರು: ಅತ್ತೆ, ಮಾವನನ್ನು ಕೊಲೆ ಮಾಡಿದ್ರೆ, ಹೆಂಡತಿ ನನ್ನೊಂದಿಗೆ ಬರ್ತಾಳೆ ಅಂತಾ ಕೊಲೆ ಮಾಡಿದೆ. ಕೋಣನಕುಂಟೆಯ ಅನ್ನಪೂಣೇಶ್ವರಿ ಲೇಔಟ್‌ನಲ್ಲಿ ಶುಕ್ರವಾರ ಅತ್ತೆ ಮುರುಗಮ್ಮ (55) ಮಾವ ಕುಮಾರ್‌ (60) ಅವರನ್ನು ಹತ್ಯೆಗೈದು ಹೆಂಡತಿ ಮತ್ತು ನೆರೆ ಮನೆಯ ನಿವಾಸಿಗೆ ಚಾಕುವಿನಿಂದ ಇರಿದು ಪರಾರಿಯಾಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿ ಸೆಂಥಿಲ್‌ ಕುಮಾರ್‌ ಪೊಲೀಸರ ವಿಚಾರಣೆಯಲ್ಲಿ  ಈ ರೀತಿಯ ಹೇಳಿಕೆ ನೀಡಿದ್ದಾನೆ. 

Advertisement

ಕಳೆದ ಐದಾರು ತಿಂಗಳಿಂದ ಪತ್ನಿಯಿಂದ ದೂರ ಇದ್ದೇನೆ. ಸಾಕಷ್ಟು ಬಾರಿ ಮನೆಗೆ ಬಂದು ಪತ್ನಿ ಮತ್ತು ಮಗುವನ್ನು ಕಳುಹಿಸುಂತೆ ಮಾವ ಕುಮಾರ್‌ ಮತ್ತು ಅತ್ತೆ ಮುರುಗುಮ್ಮನನ್ನು ಕೋರಿಕೊಂಡಿದ್ದೆ. ಆದರೆ ಅವರು ಹೆಂಡತಿಯನ್ನು ನನ್ನೊಂದಿಗೆ ಕಳುಹಿಸಲಿಲ್ಲ. ಶುಕ್ರವಾರ ಕೂಡ ಪತ್ನಿಯನ್ನು ನನ್ನೊಂದಿಗೆ ಕಳುಹಿಸುವಂತೆ ಪರಿಪರಿಯಾಗಿ ಮನವಿ ಮಾಡಿದೆ.

ಇದಕ್ಕೆ ಅತ್ತೆ-ಮಾವ ಇಬ್ಬರು ಜಗಳ ತೆಗೆದರು. ಇವರಿಬ್ಬರುನ್ನು ಹತ್ಯೆ ಮಾಡಿದರೆ, ಪತ್ನಿ ನನ್ನೊಂದಿಗೆ ಬರುತ್ತಾಳೆ ಎಂದು ಕೊಲೆ ಮಾಡಲು ಸಂಚು ರೂಪಿಸಿದೆ. ಹೀಗಾಗಿ  ರಾತ್ರಿ 8 ಗಂಟೆ ಸುಮಾರಿಗೆ ಮದ್ಯ ಸೇವಿಸಿ ಬಂದು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇಬ್ಬರನ್ನು ಕೊಲೆ ಮಾಡಿದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. 

ರಕ್ಷಣೆಗೆ ಧಾವಿಸಿದ್ದ ಪತ್ನಿ ಮತ್ತು ನೆರೆ ಮನೆಯ ನಿವಾಸಿ ಮಂಜುನಾಥ್‌ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು. ಮಗಳನ್ನು ವಾಪಸ್‌ ಕಳುಹಿಸುವಂತೆ ಕೇಳಿಕೊಂಡಿದ್ದ ಸೆಂಥಿಲ್‌ಗೆ, ತಮ್ಮ ಮನೆಯಲ್ಲಿ ಬಂದು ಇರುವಂತೆ ಅತ್ತೆ-ಮಾವ ತಿಳಿಸಿದ್ದರು.

ಹೀಗಾಗಿ ಆರೋಪಿ ಸೆಂಥಿಲ್‌ನನ್ನು ಕಳೆದ ಒಂದೂವರೆ ತಿಂಗಳಿಂದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಮೀನು ಮಾರಾಟ ಅಂಗಡಿಯೊಂದರಲ್ಲಿ ಮಾವ ಕುಮಾರ್‌ ಅವರೆ ಕೆಲಸಕ್ಕೆ ಸೇರಿಸಿದ್ದರು ಎಂದು ಪೊಲೀಸರು ವಿವರಿಸಿದರು. ಕೃತ್ಯವೆಸಗಿದ ಬಳಿಕ ಸೆಂಥಿಲ್‌ ನೆಲಮಂಗಲದ ಬಳಿ ಇರುವ ಸಂಬಂಧಿಕರೊಬ್ಬರ ಮನೆಗೆ ಹೋಗುತ್ತಿದ್ದ.

Advertisement

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.  ಘಟನೆಯಲ್ಲಿ ಗಾಯಗೊಂಡಿರುವ ಆರೋಪಿ ಪತ್ನಿ ಸತ್ಯಾವತಿ (30) ಮತ್ತು ನೆರೆ ಮನೆ ನಿವಾಸಿ ಮಂಜುನಾಥ್‌ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋಷಕರಿಲ್ಲದ ವೇಳೆ ಕರೆದೊಯ್ದು ವಿವಾಹ
ಬಂಧಿತ ಆರೋಪಿ ಸೆಂಥಿಲ್‌ ಸತ್ಯಾವತಿಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಪೋಷಕರ ವಿರೋಧವಿತ್ತು. ಮನೆಯಲ್ಲಿ ಸತ್ಯಾವತಿ ಪೋಷಕರು ಇಲ್ಲದ ವೇಳೆ ಆಕೆಯನ್ನು ಕರೆದುಕೊಂಡು ಹೋಗಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದ. ವಿವಾಹವಾದ ಬಳಿಕ ಸತ್ಯಾವತಿಯನ್ನು ತಮಿಳುನಾಡಿನ ತಿರುಪತ್ತೂರಿಗೆ ಕರೆದೊಯ್ದು ತನ್ನ ಪೋಷಕರೊಂದಿಗೆ ವಾಸವಿದ್ದ.

ಬಟ್ಟೆ ಅಂಡಿಯೊಂದರಲ್ಲಿ ಕೆಲಸಕಿದ್ದ ಸೆಂಥಿಲ್‌ ಮದ್ಯ ವ್ಯಸನಿಯಾಗಿದ್ದ. ಕುಡಿದು ಬಂದು ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಸತ್ಯಾವತಿ ಪೋಷಕರು ಆಕೆಯನ್ನು ಕರೆತಂದು ತಮ್ಮ ಬಳಿ ಇರಿಸಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next