Advertisement

ಕಾಂಗ್ರೆಸ್‌ನಿಂದ ದೇಶದ ಮಾನ ಹರಾಜು

01:53 AM Mar 09, 2019 | |

ಹುಬ್ಬಳ್ಳಿ: ದೇಶದ ಬದ್ಧತೆ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಹರಾಜು ಹಾಕುವ ಕೆಲಸ ಕಾಂಗ್ರೆಸ್‌ ನಾಯಕರಿಂದ ನಡೆಯುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಹೇಳಿಕೆಗಳು ಪಾಕಿಸ್ತಾನವನ್ನು ಬಲಪಡಿಸುವಂತಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್‌ ಆರೋಪಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ರಾಷ್ಟ್ರದ ಜನತೆ ಯುದ್ಧದ ಸಂದಿಗದ್ಧ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ವೈಮಾನಿಕ ದಾಳಿಯನ್ನು ಅನುಮಾನದಿಂದ ನೋಡುವ ಮೂಲಕ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಹೇಳಿಕೆಗಳಂತೂ ಪಾಕಿಸ್ತಾನವನ್ನು ಬಲಪಡಿಸುವಂತಿದ್ದು, ಇವರ ಹೇಳಿಕೆಗಳು ಪಾಕಿಸ್ತಾನದ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next