Advertisement

Arrested: ಅತ್ತಿಬೆಲೆ ಪಟಾಕಿ ದುರಂತ; ಮತ್ತೂಬ್ಬ ಆರೋಪಿ ಲಾರಿ ಚಾಲಕನ ಬಂಧನ

10:13 AM Dec 14, 2023 | Team Udayavani |

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು ಬುಧವಾರ ಮತ್ತೂಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ತಮಿಳುನಾಡಿನ ತೆಂಕಾಸಿ ಜಿಲ್ಲೆಯ ತಿರುವೇಂಗಡಮ್‌ ನಿವಾಸಿ ಮರದುಪಾಂಡಿ ಮಾರಿಮುತ್ತು (34) ಬಂಧಿತ. ಪಟಾಕಿ ಸಾಗಾಟದ ಲಾರಿ ಚಾಲಕನಾಗಿರುವ ಆರೋಪಿ, ತಮಿಳುನಾಡು ಅಥವಾ ಕರ್ನಾಟಕ ರಾಜ್ಯ ಸರ್ಕಾರದ ಯಾವುದೇ ಪರವಾನಿದೆ ಇಲ್ಲದೆ, ಅಕ್ರಮವಾಗಿ ಲಾರಿಯಲ್ಲಿ ನೂರಾರು ಪಟಾಕಿ ಬಾಕ್ಸ್‌ಗಳನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಅಗ್ನಿ ದುರಂತ ನಡೆದ ಅತ್ತಿಬೆಲೆಯ ಗೋಡೌನ್‌ಗೂ ಆರೋಪಿ, ತಮಿಳುನಾಡಿನ ಶಿವಕಾಶಿಯಿಂದ ಯಾವುದೇ ಪರವಾನಗಿ ಇಲ್ಲದೆ ಪಟಾಕಿ ತಂದಿದ್ದ ಎಂಬುದು ಗೊತ್ತಾಗಿದೆ ಎಂದು ಸಿಐಡಿ ಪೊಲೀಸರು ಮಾಹಿತಿ ನೀಡಿದರು.ಅ.7ರಂದು ಶಿವಕಾಶಿಯಿಂದ ಪಟಾಕಿ ತಂದು ಅತ್ತಿಬೆಲೆಯ ಗೋಡೌನ್‌ ಮುಂಭಾಗ ಪಟಾಕಿ ಬಾಕ್ಸ್‌ಗಳನ್ನು ಇಳಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಸಾವಿರಾರು ಪಟಾಕಿ ಬಾಕ್ಸ್‌ಗಳು ಸುಟ್ಟು ಹೋಗಿ, ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಾಗೂ ಗ್ರಾಹಕರು ಸೇರಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈಗಾಗಲೇ 7ಕ್ಕೂಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next