Advertisement

Gangolli: ದನ ಕಳ್ಳತನಕ್ಕೆ ಯತ್ನ

05:06 PM Aug 14, 2024 | Team Udayavani |

ಗಂಗೊಳ್ಳಿ: ನಾಡ ಗ್ರಾಮದಲ್ಲಿ ಕಾರಿನಲ್ಲಿ ಬಂದು ಬೀಡಾಡಿ ದನಗಳನ್ನು ಕಳ್ಳತನಗೈಯಲು ಯತ್ನಿಸಿದ ಘಟನೆ ನಡೆದಿದೆ.

Advertisement

ಈ ಸಂದರ್ಭ ಇದನ್ನು ಗಮನಿಸಿದ ಒಬ್ಬರು, ಬೊಬ್ಬೆ ಹಾಕಿದಾಗ ದನಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ನಾಡ ಗ್ರಾಮದ ಕೇದಾರ್‌ ಅವರು ಆ. 2ರ ರಾತ್ರಿ 2.20ರ ಸುಮಾರಿಗೆ ಮನೆಯ ಹೊರಗಡೆ ಬಂದಾಗ ಎದುರಿನ ಮೈದಾನದಲ್ಲಿ ದನಗಳು ಕೂಗುತ್ತಿದ್ದುದನ್ನು ಗಮನಿಸಿ ಆ ಕಡೆ ಹೋದಾಗ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ದನವನ್ನು ಕಳ್ಳತನಗೈಯಲು ಯತ್ನಿಸಿದ್ದಾರೆ. ಕೂಡಲೇ ಕೇದಾರ್‌ ಅವರು ಬೊಬ್ಬೆ ಹಾಕಿದಾಗ ಆರೋಪಿ ದನವನ್ನು ಅಲ್ಲಿಯೇ ಬಿಟ್ಟು, ಕಾರು ಹತ್ತಿ ಪಡುಕೋಣೆ ಕಡೆಗೆ ಪರಾರಿಯಾದರು.

ಕೇದಾರ್‌ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next