Advertisement

BJP ಶಾಸಕ ಶಿವರಾಜ್‌ ಪಾಟೀಲ್‌ ಮೇಲೆ ಹಲ್ಲೆಗೆ ಯತ್ನ: ಓರ್ವನ ಬಂಧನ

12:27 AM Apr 02, 2024 | Team Udayavani |

ರಾಯಚೂರು: ಮದುವೆ ಸಮಾರಂಭಕ್ಕೆ ತೆರಳಿದ್ದ ಬಿಜೆಪಿ ಶಾಸಕ ಡಾ| ಶಿವರಾಜ್‌ ಪಾಟೀಲ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಹೊಂಚು ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ನಗರದ ಗದ್ವಾಲ್‌ ರಸ್ತೆಯ ಬಳಿ ಶಾಸಕ ಡಾ| ಶಿವರಾಜ್‌ ಪಾಟೀಲ್‌ ಮದುವೆ ಸಮಾರಂಭಕ್ಕೆ ಹೋಗಿದ್ದರು. ಈ ವೇಳೆ ತನ್ನ ಮನೆಗೆ ನಳ್ಳಿ ಹಾಕಿಸುವಂತೆ ಚಾಂದ್‌ಪಾಷಾ ಎನ್ನುವ ವ್ಯಕ್ತಿ ಕೋರಿದ್ದಾನೆ. ಆಗ ಶಾಸಕರು ವಿಳಾಸ ನೀಡುವಂತೆ ಹೇಳಿದಾಗ ಶಾಸಕರ ಹತ್ತಿರಕ್ಕೆ ಹೋಗುವ ಯತ್ನ ಮಾಡಿದ್ದಾನೆ. ಆಗ ಆತ ಮದ್ಯ ಸೇವಿಸಿದ ವಾಸನೆ ಬಂದಿದ್ದು, ಶಾಸಕರ ಅಂಗರಕ್ಷಕರು ಮತ್ತು ಬೆಂಬಲಿಗರು ವ್ಯಕ್ತಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ.

ತಪಾಸಣೆ ಮಾಡಿದಾಗ ಆತನಲ್ಲಿ ಚಾಕು ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ವ್ಯಕ್ತಿಯನ್ನು ಮಾರ್ಕೆಟ್‌ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಲಾಗಿದೆ.

ಘಟನೆ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಶಾಸಕ ಪಾಟೀಲ್‌, ಆ ವ್ಯಕ್ತಿ ಮದ್ಯವ್ಯಸನಿಯಾಗಿದ್ದಾನೆ. ಮನೆಯಲ್ಲೂ ಪತ್ನಿಯೊಂದಿಗೆ ಜಗಳವಾಡುತ್ತಾನೆ ಎಂಬುದು ತಿಳಿದು ಬಂದಿದೆ. ಆದರೂ ತನಿಖೆ ಮಾಡುವಂತೆ ಎಸ್‌ಪಿಗೆ ತಿಳಿಸಲಾಗಿದ್ದು, ಎರಡು ದಿನಗಳಲ್ಲಿ ವರದಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next