Advertisement

ಮೂಲ ಸೌಕರ್ಯ ಒದಗಿಸಲು ಪ್ರಯತ್ನ: ಮುದ್ನಾಳ

09:36 AM Jul 08, 2020 | Suhan S |

ಯಾದಗಿರಿ: ವಡಗೇರಾ ನೂತನ ತಾಲೂಕು ವ್ಯಾಪ್ತಿಯ ಗ್ರಾಮಗಳ ಜನರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

Advertisement

ಲೊಕೋಪಯೋಗಿ ಇಲಾಖೆಯ 4.80 ಕೋಟಿ ರೂ. ವೆಚ್ಚದ ವಡಗೇರಾ ತಾಲೂಕು ಶಿವಪುರ-ಗೂಂಡೂರ ರಸ್ತೆ ಸುಧಾರಣೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ಹಳ್ಳಿಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಜನರ ಬೇಡಿಕೆಯಂತೆ ಗೋನಾಳ ಗ್ರಾಮದ ಹತ್ತಿರ ಸೇತುವೆ ನಿರ್ಮಾಣಕ್ಕೆ ಬರುವ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮಾರಣಾಂತಿಕ ಕೋವಿಡ್ ವೈರಸ್‌ ಜನರನ್ನು ಕಾಡುತ್ತಿದೆ. ಸರ್ಕಾರ ಮೊದಲು ಜನರ ಜೀವ ಉಳಿಸುವ ಪ್ರಯತ್ನಿಸುತ್ತಿದೆ. ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ಈಗಾಗಿ ಈ ವರ್ಷ ಶಾಸಕರಿಗೆ ನಿರೀಕ್ಷೆಯಂತೆ ಹೆಚ್ಚಿನ ಅನುಧಾನ ಸಿಗುವುದಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಬರುವ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಡಾ| ವೀರಬಸವಂತರಡ್ಡಿ ಮುದ್ನಾಳ, ಜಿಪಂ ಮಾಜಿ ಸದಸ್ಯರಾದ ಶ್ರೀನಿವಾಸರಡ್ಡಿ ಪಾಟೀಲ ಚನ್ನೂರ, ಸಿದ್ದಣಗೌಡ ಕಾಡಂನೋರ, ಶಂಕ್ರೆಪ್ಪಗೌಡ ಗೋನಾಲ, ಸಿದ್ದಪ್ಪಗೌಡ ಕಾಳೆಬೆಳಗುಂದಿ, ಶಿವರಾಜಪ್ಪಗೌಡ ಬೆಂಡೆಬೆಂಬಳಿ, ಈರಣ್ಣ ತಳಬಿಡಿ, ಭೀಮಣ್ಣಗೌಡ ತುಮಕೂರ, ರಾಜಶೇಖರ ಕಾಡಂನೋರ, ಸಹಾಯಕ ಇಂಜನೀಯರ್‌ ವೈ.ಬಿ. ಚವ್ಹಾಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next