Advertisement

ಸಂಕಷ್ಟ ನಿವಾರಿಸಲು ಪ್ರಯತ್ನ: ಸತೀಶ್‌ ಶೆಟ್ಟಿ ಪಟ್ಲ

07:40 PM May 05, 2019 | Sriram |

ವಿಟ್ಲ : ಕಲಾವಿದರ ಕುಟುಂಬದ ಸಂಕಷ್ಟ ನಿವಾರಿ ಸಲು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಪ್ರಯತ್ನಿಸುತ್ತಿದೆ. ಧರ್ಮ ಮಾರ್ಗದಲ್ಲಿ ನಡೆಯುವ ವ್ಯಕ್ತಿಗೆ ಭಗವಂತನ ಶಕ್ತಿ ಇರುತ್ತದೆ. ವ್ಯಕ್ತಿಯ ಪ್ರಯತ್ನದ ಜತೆಗೆ ಭಗವಂತನ ಕೃಪೆ ಇದ್ದಾಗ ಮಾತ್ರ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ಹೇಳಿದರು.

Advertisement

ಅವರು ಶನಿವಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವ ಸ್ಥಾನ ಆವರಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ವಿಟ್ಲ ಘಟಕದ ಪ್ರಥಮ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಟ್ಲ ರೋಟರಿ ಕ್ಲಬ್‌ ಅಧ್ಯಕ್ಷ ಡಾ| ಚರಣ್‌ ಕಜೆ ಮಾತ ನಾಡಿ, ಯಕ್ಷಗಾನ ಕರಾವಳಿಯ ಹೆಮ್ಮೆಯ ಕಲೆಯಾಗಿದ್ದು, ಹಲವು ಸಂಘ-ಸಂಸ್ಥೆಗಳು ಇದಕ್ಕಾಗಿ ಶ್ರಮಿಸುತ್ತಿವೆ ಎಂದರು. ಮಂಗಳೂರು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಅಶೋಕ್‌ ಎ. ಇರಾಮೂಲೆ, ಉದ್ಯಮಿ ಮಾಧವ ಮಾವೆ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಬೆಹರೈನ್‌ ಘಟಕದ ಮೋಹನದಾಸ ರೈ,, ವಿಟ್ಲ ಘಟಕದ ಗೌರವಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ, ಗೌರವ ಮಾರ್ಗದರ್ಶಕ ಸತೀಶ್‌ ಕುಮಾರ್‌ ಆಳ್ವ ಇರಾಬಾಳಿಕೆ, ಪ್ರಧಾನ ಸಂಚಾಲಕ ಸಂಜೀವ ಪೂಜಾರಿ, ಕೋಶಾಧಿಕಾರಿ ಸಂಜೀವ ಪೂಜಾರಿ ಎಂ. ಮತ್ತಿತರರು ಉಪಸ್ಥಿತರಿದ್ದರು.

ವಿಟ್ಲ ಘಟಕ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಿಕೆ ಪ್ರಸ್ತಾವಿಸಿ ದರು. ವಿಜಯಶಂಕರ ಆಳ್ವ ಮಿತ್ತಳಿಕೆ ವಂದಿಸಿದರು. ಡಾ| ಪ್ರಖ್ಯಾತ್‌ ಶೆಟ್ಟಿ ಅಳಿಕೆ ಆಶಯಗೀತೆ ಹಾಡಿದರು. ಸುರೇಶ್‌ ಶೆಟ್ಟಿ ಪಡಿಬಾಗಿಲು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next