Advertisement

Police: ಸಾರ್ವಜನಿಕ ಶಾಂತಿ ಭಂಗ ಯತ್ನ; ನೀರುಮಾರ್ಗದಲ್ಲಿ ನಾಲ್ವರು ವಶಕ್ಕೆ

09:20 PM Aug 31, 2023 | Team Udayavani |

ಮಂಗಳೂರು: ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ನೀರುಮಾರ್ಗದಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಮೊಹಮ್ಮದ್‌ ಶರೀಫ್‌, ಅಬ್ದುಲ್‌ ರಹಿಮಾನ್‌, ಚೇತನ್‌ ಹಾಗೂ ವಿಕ್ರಮ್‌ ಬಂಧಿತ ಆರೋಪಿಗಳು. ನೀರುಮಾರ್ಗ ಜಂಕ್ಷನ್‌ನ ಅಂಚೆ ಕಚೇರಿಯ ಬಳಿಯಿರುವ ಉಡುಪ ಕ್ಲಿನಿಕ್‌ನ ಮುಂಭಾಗದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿಗಳು ಪರಸ್ಪರ ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next