Advertisement

Bengaluru: ಯುವತಿಗೆ ಕಿರುಕುಳ ನೀಡಲು ಕಾರಿನ ಗಾಜು ಒಡೆಯಲು ಯತ್ನ

10:19 AM Oct 01, 2024 | Team Udayavani |

ಬೆಂಗಳೂರು: ಕಾರಿನಲ್ಲಿ ಯುವತಿಯೊಬ್ಬಳೇ ಕುಳಿತಿರುವುದನ್ನು ಗಮನಿಸಿದ ಮದ್ಯ ವ್ಯಸನಿಯೊಬ್ಬ ಕಾರಿನ ಗಾಜು ಒಡೆಯಲು ಯತ್ನಿಸಿ, ಕಿರುಕುಳ ನೀಡಿರುವ ಘಟನೆ ಮಾರತ್ತಹಳ್ಳಿ ಸೇತುವೆ ಬಳಿ ನಡೆದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆಗಿದೆ.

Advertisement

ಮಾರತ್ತಹಳ್ಳಿ ಸೇತುವೆ ಸರ್ವಿಸ್‌ ರಸ್ತೆಯ ಬಳಿ ಯುತಿಯೊಬ್ಬಳು ಕಾರಿನಲ್ಲಿ ಕುಳಿತು ಕಾಯುತ್ತಿದ್ದಾಗ ವ್ಯಕ್ತಿಯೊಬ್ಬ ಆಕೆಯ ಕಾರಿನ ಬಳಿ ಬಂದಿದ್ದಾನೆ. ಅವಳು ಒಬ್ಬಳೇ ಇರುವುದನ್ನು ಗಮನಿಸಿ, ಕಾರಿನ ನಾಲ್ಕು ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಅವು ಲಾಕ್‌ ಆಗಿದ್ದರಿಂದ ಸಾಧ್ಯವಾಗಲಿಲ್ಲ.

ಕೂಡಲೇ ಎಚ್ಚೆತ್ತ ಯುವತಿ, ಆರೋಪಿಯ ಚೇಷ್ಠೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಮುಂದಾಗಿದ್ದಾಳೆ. ಆಗ ಆರೋಪಿ, ಕಾರಿನ ಗಾಜು ಒಡೆಯಲು ಪ್ರಯತ್ನಿಸಿದ್ದಾನೆ. ಆಗ ಹೆದರಿದ ಯುವತಿ ಕೂಡಲೇ ಕಾರನ್ನು ಸ್ಟಾರ್ಟ್‌ ಮಾಡಿಕೊಂಡು ಸ್ಥಳದಿಂದ ಹೋಗಿದ್ದಾಳೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಹೆಚ್ಚು ಜಾಗ್ರತೆ ವಹಿಸಬೇಕು. ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಆಕೆ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next