Advertisement

Bangalore: ಒನ್‌ ವೇನಲ್ಲಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ

09:36 AM Mar 17, 2024 | Team Udayavani |

ಬೆಂಗಳೂರು: ಏಕಮುಖ ರಸ್ತೆಯಲ್ಲಿ ಕಾರು ಚಲಾಯಿಸಿದಲ್ಲದೆ, ಅದನ್ನು ಪ್ರಶ್ನಿಸಿದ ಬೈಕ್‌ ಸವಾರನ ಮೇಲೆ ಹಲ್ಲೆ ನಡೆಸಿ ಗೂಂಡಾ ವರ್ತನೆ ತೋರಿದ ಕಾರು ಚಾಲಕನನ್ನು ಮಹಾದೇವಪುರ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಕಾರು ಚಾಲಕ ಸುನೀಲ್‌(37) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಶುಕ್ರವಾರ ವೈಟ್‌ಫೀಲ್ಡ್‌ ಬಳಿಯ ಜಂಕ್ಷನ್‌ನಲ್ಲಿ ಏಕಮುಖ ರಸ್ತೆಯಲ್ಲಿ ಆರೋಪಿ ಸುನೀಲ್‌, ಕೆಎ 50 ಜಡ್‌ 3914 ನೋಂದಣಿಯ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಅದೇ ಮಾರ್ಗದಲ್ಲಿ ಎದುರು ಬಂದ ಬೈಕ್‌ ಸವಾರರು ಆರೋಪಿಯನ್ನು ಪ್ರಶ್ನಿಸಿ ದ್ದಾರೆ. ಅದರಿಂದ ಕೋಪಗೊಂಡ ಆರೋಪಿ, ಏಕಾಏಕಿ ಬೈಕ್‌ ಸವಾರ ರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಆರೋಪಿಯ ಗೂಂಡಾ ವರ್ತನೆ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸೃಜನ್‌ ಕದಂಬ ಎಂಬವರು ಶೇರ್‌ ಮಾಡಿ ಕಾರಿನ ನಂಬರ್‌ ಸಮೇತ ಪೊಲೀಸರ ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಮಹದೇವಪುರ ಸಂಚಾರ ಠಾಣಾ ಪೊಲೀಸರು ಆರೋಪಿ ಕಾರು ಚಾಲಕ ಸುನೀಲ್‌ನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಕಾರಿನ ವಿರುದ್ಧ ಐಎಂವಿ ಕಾಯ್ದೆ ಅಡಿ ಕೇಸ್‌ ದಾಖಲಿಸಿದ್ದಾರೆ. ಈ ಸಂಬಂಧ ಮಹದೇವಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next