Advertisement

ಚಾಕುವಿನಿಂದ ದಾಳಿ: ಆರೋಪಿಗೆ ಜೈಲು

10:08 AM Feb 22, 2022 | Team Udayavani |

ಕಲಬುರಗಿ: ವ್ಯಕ್ತಿ ಮೇಲೆ ಚಾಕುವಿನಿಂದ ದಾಳಿ ಮಾಡಿ ಕೊಲೆ ಯತ್ನಿಸಿದ್ದ ಆರೋಪಿಗೆ ಇಲ್ಲಿನ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

Advertisement

ಇಲ್ಲಿನ ಪಂಚಶೀಲ ನಗರದ ಪ್ರಿಯದರ್ಶನ ಆಲಿಯಾಸ್‌ ಛೋಟಾ ಗಾಯಕವಾಡ ಎಂಬಾತನೇ ಶಿಕ್ಷೆಗೆ ಗುರಿಯಾದವ. 2020ರ ಸೆ.7ರಂದು ಇದೇ ಪಂಚಶೀಲ ನಗರದ ವಿಶಾಲ ಎಂಬಾತನ ಮೇಲೆ ಹಳೆ ವೈಷಮ್ಯದಿಂದ ಚಾಕುವಿನಿಂದ ದಾಳಿ ಮಾಡಿ ಕೊಲೆಜಛಿ ಯತ್ನಿಸಿದ್ದ.

ಈ ಬಗ್ಗೆ ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸಿದ್ದರಾಮೇಶ್ವರ ಗಡೇದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ಜಗದೀಶ ವಿ.ಎನ್‌. ಅವರು ಈ ತೀರ್ಪು ನೀಡಿದ್ದಾರೆ. 15 ಸಾವಿರ ದಂಡದ ಹಣದಲ್ಲಿ 10 ಸಾವಿರ ರೂ.ಗಳನ್ನು ಗಾಯಾಳುವಿಗೆ ಪರಿಹಾರ ನೀಡಬೇಕೆಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next