Advertisement

ಕಾರ್ಮಿಕರ ಮೇಲೆ ಹಲ್ಲೆಗೆ ಖಂಡನೆ

10:32 AM Jun 03, 2019 | Suhan S |

ಅಥಣಿ: ಪುರಸಭೆ ಮಾಜಿ ಉಪಾಧ್ಯಕ್ಷೆ ಹಾಗೂ ಮಾಜಿ ಸದಸ್ಯನ ಮಕ್ಕಳು ಪುರಸಭೆ ಕಾರ್ಮಿಕ ಮತ್ತು ಜಿಲ್ಲಾ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ಕಾಂಬಳೆ ಮತ್ತು ಆನಂದ ಕಾಂಬಳೆ ಎಂಬುವರ ಮೇಲೆ ಹಲ್ಲೆ ಮಾಡಿ ಜೀವ ಬೇದರಿಕೆ ಹಾಕಿದ್ದನ್ನು ಖಂಡಿಸಿದ ಕಾರ್ಮಿಕರು, ಪಟ್ಟಣದ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಅಥಣಿ ಪುರಸಭೆ ಕಚೇರಿ ಎದುರು ಪ್ರತಿಭಟಿಸಿದರು.

Advertisement

ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಹರೀಶ ನಾಯಿಕ ಮಾತನಾಡಿ, ನಿರಂತರವಾಗಿ ಪೌರ ಕಾರ್ಮಿಕರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಪುರಸಭೆ ಮಾಜಿ ಉಪಾಧ್ಯಕ್ಷ ಮತ್ತು ಮಾಜಿ ಸದಸ್ಯನ ಮಕ್ಕಳು ಬೀದಿ ದೀಪ ನಿರ್ವಹಣೆಯ ಕಾರ್ಮಿಕ ಆನಂದ ಕಾಂಬಳೆ ಹಾಗೂ ಪೌರ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ಕಾಂಬಳೆ ಮೇಲೆ ಹಲ್ಲೆ ಅತ್ಯಂತ ಖಂಡನಾರ್ಹವಾಗಿದೆ. ಇದರಿಂದ ಪೌರ ಕಾರ್ಮಿಕರು ಮಾನಸಿಕವಾಗಿ ನೊಂದಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದರೆ ರಾಜ್ಯಾದ್ಯಂತ ಪೌರ ಕಾರ್ಮಿಕರ ಪ್ರತಿಭಟನೆ ನಡೆಸಬೇಕಾದಿತು ಎಂದು ಎಚ್ಚರಿಸಿದರು.

ಹಲ್ಲೆಗೊಳಗಾದ ಪೌರ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕಾಂಬಳೆ ಮಾತನಾಡಿ, ಅಥಣಿ ಪುರಸಭೆಯಲ್ಲಿ ಸುಮಾರು 15 ವರ್ಷಗಳಿಂದ ಅತಿ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಾ ಬಂದಿರುವ ಪೌರ ಕಾರ್ಮಿಕರು ಇಂದು ಯಾವ ತಪ್ಪುಗಳನ್ನು ಮಾಡದೇ ತಮ್ಮ ಕಾರ್ಯ ಮಾಡುತ್ತಿದ್ದಾರೆ. ಕಾರ್ಮಿಕರ ಮೇಲೆ ವಿನಾಕಾರಣ ದಬ್ಟಾಳಿಕೆ ಮಾಡಿ ಜೀವ ಬೇದರಿಕೆ ಹಾಕಿದ್ದಾರೆ ಎಂದು ಆಪಾದಿಸಿದರು.

ಅನಿಲ ಕಾಂಬಳೆ, ರವಿ ಬಜಂತ್ರಿ, ಅಣ್ಣಪ್ಪ ಕಾಂಬಳೆ ಸೇರಿದಂತೆ ಶೇಡಬಾಳ, ಕುಡಚಿ, ಉಗಾರ, ಐನಾಪುರ, ಹಾರೂಗೇರಿ, ಮುಗಳಖೋಡ ಸೇರಿದಂತೆ ಇನ್ನಿತರ ಕಡೆಯ ಪುರಸಭೆ ಮತ್ತು ಪಪಂ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next